#Exclusive: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೆಗ್ಗಣಗಳು ಸಾರ್.. ಹೆಗ್ಗಣಗಳು..!

Published : Nov 01, 2016, 11:38 AM ISTUpdated : Apr 11, 2018, 12:35 PM IST
#Exclusive: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೆಗ್ಗಣಗಳು ಸಾರ್.. ಹೆಗ್ಗಣಗಳು..!

ಸಾರಾಂಶ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳನ್ನು ನೋಡಲು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಹೆಗ್ಗಣಗಳು ಮಾತ್ರ ಪ್ರತಿ ಕ್ಷಣ, ಪ್ರತೀ ದಿನ ರೋಗಿಗಳ ಅಕ್ಕ-ಪಕ್ಕಾನೆ ಓಡಾಡುತ್ತಿರುತ್ತವೆ. ರಾತ್ರಿಯಾದರೆ ರೋಗಿಗಳ ಮೈಮೇಲೆ ಆಟ ಆಡುತ್ತವೆ. ಕೆಲವೊಂದು ಸಲ ರೋಗಿಗಳಿಗೆ ಕಚ್ಚಿ ಗಾಯವನ್ನೂ ಮಾಡುತ್ತವೆ. ವಿಕ್ಟೋರಿಯಾ ಆಸ್ಪತ್ರೆಯ ಈ ಅಧ್ವಾನದ ಬಗ್ಗೆ  ರೋಗಿಗಳು ಮತ್ತವರ ಸಂಬಂಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.

ಬೆಂಗಳೂರು(.02): ಅದು ಬೆಂಗಳೂರಿನ ದೊಡ್ಡ ಸರ್ಕಾರಿ ಆಸ್ಪತ್ರೆ. ಇಲ್ಲಿ ರೋಗಿಗಳಿಗೆ ಹೆಚ್ಚಾಗಿ ದರ್ಶನ ಕೊಡುವವರು ವೈದ್ಯರಲ್ಲ. ಬದಲಾಗಿ ವಿಶೇಷ ಅತಿಥಿಗಳು. ಈ ವಿಶೇಷ ಅತಿಥಿಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಓಡಾಡ್ತಾರೆ. ರೋಗಿಗಳಿಗೆ ಭಯವನ್ನೂ ಹುಟ್ಟಿಸುತ್ತವೆ. ಅವರನ್ನು ಕಂಡರೆ ರೋಗಿಗಳು, ಅವರ ಸಂಬಂಧಿಕರು ಮಾರು ದೂರ ಓಡಿ ಹೋಗಲೇಬೇಕಾಗುತ್ತದೆ. ಅಸಲಿಗೆ ಆ ಆಸ್ಪತ್ರೆ ಯಾವುದು..? ಆ ವಿಶೇಷ ಅತಿಥಿಗಳು ಯಾರು? ಇಲ್ಲಿದೆ ಸಂಪೂರ್ಣ ವಿವರ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳನ್ನು ನೋಡಲು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಹೆಗ್ಗಣಗಳು ಮಾತ್ರ ಪ್ರತಿ ಕ್ಷಣ, ಪ್ರತೀ ದಿನ ರೋಗಿಗಳ ಅಕ್ಕ-ಪಕ್ಕಾನೆ ಓಡಾಡುತ್ತಿರುತ್ತವೆ. ರಾತ್ರಿಯಾದರೆ ರೋಗಿಗಳ ಮೈಮೇಲೆ ಆಟ ಆಡುತ್ತವೆ. ಕೆಲವೊಂದು ಸಲ ರೋಗಿಗಳಿಗೆ ಕಚ್ಚಿ ಗಾಯವನ್ನೂ ಮಾಡುತ್ತವೆ. ವಿಕ್ಟೋರಿಯಾ ಆಸ್ಪತ್ರೆಯ ಈ ಅಧ್ವಾನದ ಬಗ್ಗೆ  ರೋಗಿಗಳು ಮತ್ತವರ ಸಂಬಂಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.

ಆಸ್ಪತ್ರೆಯಲ್ಲಿರುವ ಹೆಗ್ಗಣಗಳ ಕಾರುಬಾರು ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಪ್ಪ ಅವರನ್ನು ಸುವರ್ಣ ನ್ಯೂಸ್​ ಸಂಪರ್ಕಿಸಿತು. ಆದರೆ, ಅವರು ಈ ವಿಚಾರವಾಗಿ ಮಾತನಾಡಲು ತಯಾರಿಲ್ಲ. ಬೆನ್ನು ಬಿದ್ದಾಗ ಡಾ.ದುರ್ಗಪ್ಪ ತಮ್ಮ ಛೇಂಬರ್​ನಿಂದ ಹೊರಬಂದು ಕಾರು ಹತ್ತಿ ಓಡಿಹೋಗಿದ್ದಾರೆ.

ಪ್ರತಿ ವರ್ಷ ಆಸ್ಪತ್ರೆ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಸರ್ಕಾರ ಬಿಡುಗಡೆ ಮಾಡುತ್ತವೆ. ಆದರೆ, ಆ ಹಣ ಯಾವುದಕ್ಕೆ ಖರ್ಚ ಮಾಡಲಾಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬಹುಶಃ ಆಸ್ಪತ್ರೆಯಲ್ಲಿರುವ ಹೆಗ್ಗಣಗಳೇ ತಿಂದಿರಬೇಕು. ಅದೇನಿದ್ದರೂ, ರೋಗಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗ ಬಗೆಹರಿಸಲಿ ಎನ್ನುವುದೇ ನಮ್ಮ ಆಶಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!