
ಬೆಂಗಳೂರು(ಮಾ.09): ಬೆಂಗಳೂರಿನಲ್ಲಿ ಮಾಂತ್ರಿಕನಿಂದ 22 ವರ್ಷದ ಯುವತಿಯ ವಶೀಕರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೇರಳದ ಸಂತೋಷ್ ಎಂಬಾತನೇ ಯುವತಿಯೊಬ್ಬಳನ್ನು ವಶೀಕರಣ ಮಾಡಿದ್ದು, ಕಷ್ಟ ನಿವಾರಣೆ ಮಾಡುತ್ತೇನೆ ಎಂದು ಹೇಳಿ ಯುವತಿಯ ತಂದೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ನಿಮ್ಮ ಮಗಳಿಗೆ ಒಳ್ಳೆಯದಾಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕೆಂದ್ದು ಹೇಳಿ ನಂಬಿಸಿದ್ದಾನೆ. ಇನ್ನು ಪೂಜೆ ನೆಪದಲ್ಲಿ ಯುವತಿಯನ್ನು ವಶೀಕರಣ ಮಾಡಿಕೊಂಡಿದ್ದಾನೆ.
ವಶೀಕರಣದ ಬಳಿಕ ಯುವತಿಯನ್ನು ತನ್ನ ಮನೆ ಮತ್ತು ಕೇರಳಕ್ಕೆ ಕರೆದೊಯ್ದು, ಕೇರಳದಲ್ಲಿ ಯುವತಿಯ ವಿಡಿಯೋ ಚಿತ್ರೀಕರಿಸಿದ್ದಾನೆ. ಇನ್ನು ಆ ಹುಡಗಿಗೆ ನಾನು ಆತ್ಮಹತ್ಯೆ ಮಾಡಿಕೊಂಡರೆ ತಂದೆ ತಾಯಿ ಕಾರಣ ಎಂದು ಯುವತಿಯಿಂದಲೇ ಪತ್ರ ಬರೆಸಿಕೊಂಡಿದ್ದ ಅಸಾಮಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.