
ಮಹಾರಾಷ್ಟ್ರ[ಫೆ.01]: ಇಲ್ಲೊಂದು ಶಾಲೆಯಲ್ಲಿ ನಡೆದ ಘಟನೆಯು ಮಕ್ಕಳು ಸೇರಿದಂತೆ ಶಿಕ್ಷಕರನ್ನು ಭಯಭೀತಗೊಳಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಅನ್ನದಾಸೋಹದಡಿಯಲ್ಲಿ ಮಕ್ಕಳಿಗೆ ಬಡಿಸಲಾದ ಊಟದಲ್ಲಿ ಹಾವು ಪತ್ತೆಯಾಗಿದೆ.
ಬುಧವಾರದಂದು ಮಹಾರಾಷ್ಟ್ರದ ಗರ್ ಗವಾನ್ ಜಿಲ್ಲೆಯ ಪರಿಷತ್ ಪ್ರೈಮರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಒಂದನೇ ತರಗರತಿಯಿಂದ 5ನೇ ತರಗತಿಯನ್ನು ಇಲ್ಲಿ ನಡೆಸಲಾಗುತ್ತಿದ್ದು 80ಕ್ಕೂ ಅಧಿಕ ಮಂದಿ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಎಂದಿನಂತೆ ಮಕ್ಕಳಿಗೆ ಮಧ್ಯಾಹ್ನದ ಊಟ ಬಡಿಸಲಾಗುತ್ತಿದ್ದು, ಈ ವೇಳೆ ಇದ್ದಕ್ಕಿದ್ದಂತೆಯೇ ಊಟದ ಪಾತ್ರೆಯಲ್ಲಿ ಹಾವು ಪತ್ತೆಯಾಗಿದೆ. ಇದನ್ನು ಕಂಡ ಪ್ರತಿಯೊಬ್ಬರೂ ಬೆಚ್ಚಿ ಬಿದ್ದಿದ್ದಾರೆ.
ಘಟನೆಯ ಬಳಿಕ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ 'ಊಟದಲ್ಲಿ ಹಾವು ಪತ್ತೆಯಾದ ಬಳಿಕ ಮಕ್ಕಳಿಗೆ ಊಟ ಬಡಿಸುವುದನ್ನು ನಿಲ್ಲಿಸಿದ್ದೇವೆ. ಹೀಗಾಗಿ ಅಧಿಕ ಮಕ್ಕಳು ಊಟ ಸಿಗದೆ ಹಸಿವಿನಿಂದ ಪರದಾಡಿದ್ದಾರೆ. ಕೆಲ ಮಕ್ಕಳು ಹಾವು ನೋಡಿ ಓಡಿ ಹೋದರೆ, ಶಿಕ್ಷಕರು ಭಯ ಬಿದ್ದಿದ್ದಾರೆ' ಎಂದಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಇನ್ನು ಮಧ್ಯಾಹ್ನದ ಊಟ ತಯಾರಿಸುವ ಜವಾಬ್ದಾರಿಯನ್ನು ಸ್ಥಳೀಯರಿಗೆ ವಹಿಸಲಾಗಿತ್ತೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ