ಅಮರಾವತಿಯಲ್ಲಿ ಮತ್ತೊಂದು ತಿರುಪತಿ!

Published : Feb 01, 2019, 09:28 AM IST
ಅಮರಾವತಿಯಲ್ಲಿ ಮತ್ತೊಂದು ತಿರುಪತಿ!

ಸಾರಾಂಶ

ಅಮರಾವತಿಯಲ್ಲಿ ಮತ್ತೊಂದು ತಿರುಪತಿ ರೀತಿ ದೇಗುಲ ನಿರ್ಮಾಣ| 150 ಕೋಟಿ ರು. ವೆಚ್ಚದಲ್ಲಿ ದೇವಾಲಯ ನಿರ್ಮಾಣ| 25 ಎಕರೆ ಜಾಗದಲ್ಲಿ 2 ವರ್ಷದಲ್ಲಿ ಮಂದಿರ ಪೂರ್ಣ

ತಿರುಪತಿ[ಫೆ.01]: ರಾಜ್ಯ ವಿಭಜನೆ ಬಳಿಕ ತಿರುಪತಿ ತಿರುಮಲ ದೇಗುಲ ನೂತನ ತೆಲಂಗಾಣ ರಾಜ್ಯದ ಪಾಲಾದ ಹಿನ್ನೆಲೆಯಲ್ಲಿ, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಇದೀಗ ತಮ್ಮ ರಾಜ್ಯದ ರಾಜಧಾನಿ ಅಮರಾವತಿಯಲ್ಲಿ ತಿರುಪತಿ ದೇಗುಲದ ಪ್ರತಿರೂಪಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ದೇಗುಲಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಗುರುವಾರ ನೆರವೇರಿಸಲಾಗಿದೆ.

ಸುಮಾರು 25 ಎಕರೆ ಪ್ರದೇಶದಲ್ಲಿ 150 ಕೋಟಿ ರು. ವೆಚ್ಚದಲ್ಲಿ ದೇಗುಲ ಮತ್ತು ದೇಗುಲ ಸಂಕೀರ್ಣದಲ್ಲಿ ಇತರೆ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಲಾಗಿದೆ. ಫೆ.10ರಂದು ಅಡಿಗಲ್ಲಿಟ್ಟು ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ದೇವಾಲಯಕ್ಕೆ ಸರ್ಕಾರ ಯಾವುದೇ ಶುಲ್ಕವಿಲ್ಲದೇ ಭೂಮಿಯನ್ನು ದೇಣಿಗೆ ನೀಡಿದೆ. ದೇವಾಲಯ ರಾಜಗೋಪುರ, ಹನುಮಂತನ ಗುಡಿಯನ್ನೂ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ದೇಗುಲವನ್ನು ಸಂಪೂರ್ಣವಾಗಿ ಆಗಮ ಮತ್ತು ವಾಸ್ತುಶಾಸ್ತ್ರದ ಅನ್ವಯವೇ ನಿರ್ಮಿಸಲಾಗುವುದು. ತಿರುಪತಿ ದೇಗುಲದ ನೇತೃತ್ವದಲ್ಲೇ ದೇಗುಲದ ವಿನ್ಯಾಸವನ್ನು ಸಿದ್ಧಗೊಳಿಸಲಾಗಿದೆ. ದೇಗುಲವು ಚೋಳ, ಪಲ್ಲವ, ಚಾಲುಕ್ಯ, ವಿಜಯನಗರ ಕಾಲದ ಶಿಲ್ಪಕಲೆಯನ್ನು ಒಳಗೊಂಡಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು