
ಬೆಂಗಳೂರು (ಫೆ.02): ವಿಧಾನಸೌಧದ ಆವರಣದಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು .
ವಿಧಾನಸೌಧದ ಉತ್ತರದ್ವಾರದ ಹಾಲ್’ನಲ್ಲಿ ನಾಗರ ಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸೌಧ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.
ಹಾವು ಪ್ರತ್ಯಕ್ಷದಿಂದ ಸರ್ಕಾರಕ್ಕೆ ಶನಿದೋಷ ಎದುರಾಗಿದೆಯಾ ಎಂಬ ಗುಸುಗುಸು ಸಿಬ್ಬಂದಿ ಮಧ್ಯೆ ಹರಿದಾಡುತ್ತಿತ್ತು.
ಇನ್ನು ಕೆಲ ದಿನಗಳ ಸಿಎಂ ಸಿದ್ದರಾಮಯ್ಯ ಮೇಲೆ ಕಾಗೆಯೊಂದು ಹಿಕ್ಕೆ ಹಾಕಿತ್ತು. ಇದಕ್ಕೂ ಮೊದಲು ಕಾಗೆಯೊಂದು ಸಿಎಂ ಕಾರಿನ ಮೇಲೆ ಕೂತಿತ್ತು .
ಈ ಎಲ್ಲಾ ಸೂಚ್ಯಕಗಳು ಸಿಎಂಗೆ ಶನಿ ಕಾಟ ಎದುರಾಗಿದೆಯಾ ಎಂಬ ಮಾತುಗಳು ಕೇಳಿಬಂದಿದ್ದವು.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.