ಎಲ್ಲಾ ಭಗವಂತನ ಇಚ್ಛೆ: 14 ಕಿ. ಮೀ ಕಾಲ್ನಡಿಗೆ ಮೂಲಕ ಹರಕೆ ತೀರಿಸಿದ ಸ್ಮೃತಿ ಇರಾನಿ!

Published : May 29, 2019, 01:35 PM IST
ಎಲ್ಲಾ ಭಗವಂತನ ಇಚ್ಛೆ: 14 ಕಿ. ಮೀ ಕಾಲ್ನಡಿಗೆ ಮೂಲಕ ಹರಕೆ ತೀರಿಸಿದ ಸ್ಮೃತಿ ಇರಾನಿ!

ಸಾರಾಂಶ

ಅಮೇಥಿಯಲ್ಲಿ ರಾಹುಲ್ ವಿರುದ್ಧ ಗೆದ್ದ ಸ್ಮೃತಿ ಇರಾನಿ| ಗೆಲುವಿನ ಬೆನ್ನಲ್ಲೇ ಸಿದ್ಧಿ ವಿನಾಯಕನ ದರ್ಶನ ಪಡೆದ ಸೂತನ ಸಂಸದೆ| ಎಲ್ಲಾ ಭಗವಂತನ ಇಚ್ಛೆ 14. ಕಿ.ಮೀಟರ್ ಕಾಲ್ನಡಿಗೆ ಬಳಿಕ ಸ್ಮೃತಿ ಇರಾನಿ ಮಾತು

ಮುಂಬೈ[ಮೇ.29]: ಅಮೇಥಿಯಿಂದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸ್ಮೃತಿ ಇರಾನಿ ತಮ್ಮ ಮನೆಯಿಂದ 14 ಕಿ. ಮೀ ದೂರಲ್ಲಿರುವ ಮುಂಬೈನ ಸಿದ್ಧಿ ವಿನಾಯಕ ಮಂದಿರಕ್ಕೆ ಕಾಲ್ನಡಿಗೆಯಲ್ಲೇ ತೆರಳಿ ಹರಕೆ ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಮೃತಿ ಇರಾನಿಯೊಂದಿಗೆ ಅವರ ಗೆಳತಿ ಹಾಗೂ ಖ್ಯಾತ ಬಾಲಿವುಡ್ ನಿರ್ದೆಶಕಿ ಏಕ್ತಾ ಕಪೂರ್ ಕೂಡಾ ಇದ್ದರು. 

ಸಿದ್ಧಿ ವಿನಾಯಕ ಮಂದಿರಕ್ಕೆ ಕಾಲ್ನಡಿಗೆಯಲ್ಲಿ ತಲುಪಿದ ಬಳಿಕ ಸ್ಮೃತಿ ಇರಾನಿ ಜೊತೆ ತೆಗೆದ ಸೆಲ್ಫೀಯೊಂದನ್ನು ಶೇರ್ ಮಾಡಿಕೊಂಡಿರುವ ಏಕ್ತಾ ಕಪೂರ್ '14 ಕಿ. ಮೀಟರ್ ನಡೆದು ಸಿದ್ಧಿ ವಿನಾಯಕನ ಬಳಿ ತಲುಪಿದ ಬಳಿಕದ ಗ್ಲೋ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ 'ಇದು ಭಗವಂತನ ಇಚ್ಛೆ, ಭಗವಂತ ಕರುಣಾಮಯಿ' ಎಂದಿದ್ದಾರೆ.

ಏಪ್ರಿಲ್ 23ರಂದು ಹೊರದಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಮೇಥಿಯಿಂದ ಕಣಕ್ಕಿಳಿದಿದ್ದ ಸ್ಮೃತಿ ಇರಾನಿ, ತನ್ನ ಎದುರಾಳಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು