
ನವದೆಹಲಿ (ಡಿ. 20): 'ಕರ್ನಾಟಕ ಭಾರತದ ಒಂದು ಭಾಗ' ಎನ್ನುವುದನ್ನು ಬಿಜೆಪಿ ಶಾಸಕ ಸಿ.ಟಿ ರವಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರಿಗೆ ಮನದಟ್ಟು ಮಾಡಿದ್ದಾರೆ.
ಕೇಂದ್ರ ಜವಳಿ ಸಚಿವಾಲಯವು ನೇಕಾರರಿಗೆ ನೂಲಿನ ಬಗ್ಗೆ ಮಾಹಿತಿ ಒದಗಿಸಲು 'ಈಧಾಗ' ಎನ್ನುವ ಹೊಸ ಆ್ಯಪ್ ಒಂದನ್ನು ನಿನ್ನೆ ಬಿಡುಗಡೆ ಮಾಡಿದೆ. ಇದನ್ನು ಹಿಂದಿ, ಇಂಗ್ಲೀಷ್, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ತಮಿಳು,
ಬೆಂಗಾಲಿ, ಒಡಿಸ್ಸಿ, ಅಸ್ಸಾಮಿ, ಉರ್ದು ಭಾಷೆಯಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಕನ್ನಡದಲ್ಲಿ ಈ ಆ್ಯಪ್ ಲಭ್ಯವಿಲ್ಲ. ಹಾಗಾಗಿ ಸಿಟಿ ರವಿ ಇದರ ಬಗ್ಗೆ ಸ್ಮ್ರುತಿ ಇರಾನಿಯವರಿಗೆ ಟ್ವೀಟ್ ಮಾಡಿದ್ದರು.
ಸಿಟಿ ರವಿಯವರ ಈ ಟ್ವೀಟ್ ಗೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.