'ಗಜ'ಕ್ಕೆ ಆರು ಬಲಿ: ಸಂತ್ರಸ್ತರ ಕೇಂದ್ರಕ್ಕೆ 76 ಸಾವಿರ ಮಂದಿ ರವಾನೆ

Published : Nov 16, 2018, 10:24 AM ISTUpdated : Nov 16, 2018, 09:17 PM IST
'ಗಜ'ಕ್ಕೆ ಆರು ಬಲಿ: ಸಂತ್ರಸ್ತರ ಕೇಂದ್ರಕ್ಕೆ 76 ಸಾವಿರ ಮಂದಿ ರವಾನೆ

ಸಾರಾಂಶ

ಗಾಜಾ ಚಂಡಮಾರುತದಿಂದ ಕಡಲೂರಿನಲ್ಲಿ ಎರಡು ಹಾಗೂ ತಂಜಾವೂರಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಯಾವೆಲ್ಲ ಪ್ರದೇಶಗಳಿಗೆ ಚಂಡಮಾರುತ ಪ್ರವೇಶಿಸುವ ಅನುಮಾನ ವ್ಯಕ್ತವಾಗಿದೆಯೋ ಆ ಎಲ್ಲಾ ಭಾಗಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಈಗಾಗಲೇ 76 ಸಾವಿರ ಮಂದಿಯನ್ನು ಮನೆಯಿಂದ ದೂರ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. 

ಚೆನ್ನೈ[ನ.16]: ಶುಕ್ರವಾರ ರಾತ್ರಿ 1 ಗಂಟೆ 40 ನಿಮಿಷಕ್ಕೆ 'ಗಜ' ಚಂಡಮಾರುತವು ತಮಿಳುನಾಡಿನ ಕರಾವಳಿ ಭಾಗಕ್ಕೆ ಅಪ್ಪಳಿಸಿದೆ. ಬಿರುಗಾಳಿಯ ಹೊಡೆತಕ್ಕೆ ತಮಿಳುನಾಡಿನ ನಾಗಪಟ್ಟಣಂ ಬಳಿ ಭೂಕುಸಿತ ಸಂಭವಿಸಿದೆ. ಭೂ ಕುಸಿತದ ವೇಳೆ ಗಾಳಿಯ ವೇಗವು ಪ್ರತಿ ಗಂಟೆಗೆ 90-100 ಕಿ. ಮೀಟರ್ ನಷ್ಟು ದಾಖಲಾಗಿದೆ. ಹವಾಮಾನ ಇಲಾಖೆ ನೀಡಿದ ವರದಿಯನ್ವಯ 'ಗಜ' ಚಂಡಮಾರುತವು ನಾಗಪಟ್ಟಿಣಂ ಹಾಗೂ ವೆದಾರ್ನಿಯಂ ನಡುವಿನ ಪಶ್ಚಿಮ ಹಾಗೂ ನೈಋತ್ಯ ಭಾಗವನ್ನು ದಾಟಿ ಮುಂದೆ ಸಾಗಿದೆ. ಈ ಬಿರುಗಾಳಿಯು ಪಶ್ಚಿಮ ಭಾಗದಲ್ಲಿ ಮುಂದೆ ಸಾಗಲಿದ್ದು, ಮುಂದಿನ 6 ಗಂಟೆಗಳಲ್ಲಿ ನಿಧಾನವಾಗಿ ಗಾಳಿಯ ವೇಗ ಕಡಿಮೆಯಾಗಲಿದೆ. ಗಾಜಾ ಚಂಡಮಾರುತದಿಂದ ಕಡಲೂರಿನಲ್ಲಿ ಎರಡು ಹಾಗೂ ತಂಜಾವೂರಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

"

ಇದನ್ನೂ ಓದಿ: ತಮಿಳುನಾಡಿಗೆ ಅಪ್ಪಳಿಸಲಿದೆ 'ಗಜ’? : ಬೆಂಗಳೂರಿನಲ್ಲಿ ಮೂರು ದಿನ ಮಳೆ

ಯಾವೆಲ್ಲ ಪ್ರದೇಶಗಳಿಗೆ ಚಂಡಮಾರುತ ಪ್ರವೇಶಿಸುವ ಅನುಮಾನ ವ್ಯಕ್ತವಾಗಿದೆಯೋ ಆ ಎಲ್ಲಾ ಭಾಗಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಈಗಾಗಲೇ 76 ಸಾವಿರ ಮಂದಿಯನ್ನು ಮನೆಯಿಂದ ದೂರ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. 

ಚಂಡಮಾರುತ ಯಾವೆಲ್ಲಾ ಜಿಲ್ಲೆಗಳಿಗೆ ಪ್ರವೇಶಿಸುತ್ತದೆ ಎಂದು ಅಂದಾಜಿಸಲಾಗಿತ್ತೋ ಆ ಎಲ್ಲಾ ಪ್ರದೇಶಗಳಲ್ಲೂ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ನಾಗಪಟ್ಟಿಣಂ ಜಿಲ್ಲೆಯಿಂದ ಈವರೆಗೂ 1313 ಜನರನ್ನು ಸಂತ್ರಸ್ತ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು