
ಬಳ್ಳಾರಿ(ಸೆ.16): ಮಳೆಗಾಗಿ ದೇವರಿಗೆ ಪ್ರಾರ್ಥನೆ ಹರಕೆ, ಅಭಿಷೇಕ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಗಣಿನಾಡಿನಲ್ಲಿ ಮಳೆಗಾಗಿ ಜೀವಂತವಾಗಿರುವ ವ್ಯಕ್ತಿಯನ್ನ ಶವ ಸಂಸ್ಕಾರದ ವಿಧಿವಿಧಾನಗಳ ರೀತಿಯಲ್ಲಿ ಸಿದ್ಧಗೊಳಿಸಿ ಶವದಂತೆ ಊರು ತುಂಬಾ ಮೆರವಣಿಗೆ ಮಾಡಿ, ಸ್ಮಶಾನದಲ್ಲಿಟ್ಟು ಬರುವ ವಿಚಿತ್ರ ಸಂಪ್ರದಾಯ ಬೆಳಕಿಗೆ ಬಂದಿದೆ.
ಬಳ್ಳಾರಿ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಎಂಬ ಗ್ರಾಮದಲ್ಲಿ ಇಂತಹ ವಿಚಿತ್ರ ಸಂಪ್ರದಾಯವಿದ್ದು, ಗ್ರಾಮದಲ್ಲೇ ಒಬ್ಬ ವೃದ್ಧರನ್ನ ಆಯ್ಕೆ ಮಾಡಿಕೊಂಡು ಶವದ ರೀತಿ ಸಿದ್ಧಗೊಳಿಸಿ ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿ ಸ್ಮಶಾನದಲ್ಲಿಟ್ಟು ತಿರುಗಿ ನೋಡದಂತೆ ಹಿಂತಿರುಗಿ ಗ್ರಾಮಕ್ಕೆ ಬರುತ್ತಾರೆ.
ನಂತರ ಸ್ನಾನ ಮಾಡಿ ದೇವರ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಇದರಿಂದ ಮಳೆಯಾಗುತ್ತದೆ, ಹಾಗೂ ಬರಗಾಲ ದೂರವಾಗತ್ತದೆ ಎನ್ನುವುದು ಈ ಗ್ರಾಮಸ್ಥರ ನಂಬಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.