‘ವಿದೇಶಗಳಲ್ಲಿ ಮಸೀದಿ ಸುತ್ತುವ ಮೋದಿ ರಾಮಜನ್ಮಭೂಮಿಗೇಕೆ ಬಂದಿಲ್ಲ’?

Published : Nov 08, 2018, 05:32 PM ISTUpdated : Nov 08, 2018, 05:59 PM IST
‘ವಿದೇಶಗಳಲ್ಲಿ ಮಸೀದಿ ಸುತ್ತುವ ಮೋದಿ ರಾಮಜನ್ಮಭೂಮಿಗೇಕೆ ಬಂದಿಲ್ಲ’?

ಸಾರಾಂಶ

ಪ್ರಧಾನಿ ಮೋದಿ ಏಕೆ ರಾಮಜನ್ಮಭೂಮಿಗೆ ಭೇಟಿ ನೀಡಿಲ್ಲ?! ಪ್ರಧಾನಿ ನರೇಂದ್ರ ಮೋದಿ ಮೇಲೆ ಹರಿಹಾಯ್ದ ಮಿತ್ರಪಕ್ಷ ಶಿವಸೇನೆ! ವಿದೇಶಗಳಲ್ಲಿ ಮಸೀದಿಗೆ ಭೇಟಿ ನೀಡೋ ಪ್ರಧಾನಿ ಎಂದು ಮೂದಲಿಸಿದ ಶಿವಸೇನೆ! ಇದುವರೆಗೂ ರಾಮಜನ್ಮಭೂಮಿಗೆ ಕಾಲಿರಿಸದ ಮೋದಿ ಮೇಲೆ ಶಿವಸೇನೆ ಗರಂ! ಸುಗ್ರೀವಾಜ್ಞೆ ಜಾರಿಗಾಗಿ ಹಿಂದೂ ಸಂಘಟನೆಗಳ ಆಗ್ರಹಕ್ಕೆ ಧ್ವನಿಗೂಡಿಸಿದ ಶಿವಸೇನೆ

ಮುಂಬೈ(ನ.8): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವ ಹಿಂದೂ ಸಂಘಟನೆಗಳ ಬೇಡಿಕೆಗೆ ದನಿಗೂಡಿಸಿರುವ ಶಿವಸೇನೆ, ರಾಮ ಮಂದಿರ ನಿರ್ಮಾಣ ವಿಚಾರವಾಗಿ ಪ್ರಧಾನಿ ನರೆಂದ್ರ ಮೋದಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ. 

ನರೇಂದ್ರ ಮೋದಿ 2014 ರ ಚುನಾವಣೆಯನ್ನು ರಾಮನ ಹೆಸರಿನಲ್ಲಿ ಗೆದ್ದಿದ್ದರು. ಆದರೆ ಮೋದಿ ಈವರೆಗೂ ಕೇದಾರನಾಥಕ್ಕೆ ಮೂರು ಬಾರಿ ಭೇಟಿ ನೀಡಿದ್ದು, ರಾಮಜನ್ಮಭೂಮಿಗೆ ಒಮ್ಮೆಯೂ ಏಕೆ ಭೇಟಿ ನೀಡಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.

ಮೋದಿ ಸ್ವಕ್ಷೇತ್ರ ವಾರಣಾಸಿಗೂ ಹಲವು ಬಾರಿ ಭೇಟಿ ನೀಡಿದ್ದಾರೆ. ವಿದೇಶಗಳ ಪ್ರವಾಸದಲ್ಲಿ ಮಸೀದಿಗಳಿಗೂ ಭೇಟಿ ನೀಡಿದ್ದಾರೆ. ಆದರೆ ರಾಮಜನ್ಮಭೂಮಿಗೆ ಒಮ್ಮೆಯೂ ಭೇಟಿ ನೀಡಿ ಪೂಜೆ ಸಲ್ಲಿಸಿಲ್ಲ ಶಿವಸೇನೆ ಕಿಡಿಕಾರಿದೆ.

 
ಪ್ರಧಾನಿಗೆ ಅಯೋಧ್ಯೆ ಹಾಗೂ ರಾಮನ ಬಗ್ಗೆ ನೆನಪೇ ಇಲ್ಲವೇ ಎಂದು ಶಿವಸೇನೆ ಪ್ರಶ್ನಿಸಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಸೌದಿ ಅರೇಬಿಯಾದಲ್ಲಿ ದೇವಾಲಯ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ ಆದರೆ ಭಾರತದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಏಕೆ ಸಾಧ್ಯವಾಗುವುದಿಲ್ಲ ಎಂದು ಕೇಳಿದೆ. 

ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ ವಿಷಯದ ವಿವಾದದ ಪ್ರಕರಣದ ವಿಚಾರಣೆಯನ್ನು 2019 ಕ್ಕೆ ಮುಂದೂಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವುದಕ್ಕೆ ಹಿಂದೂ ಸಂಘಟನೆಗಳು ಬೇಡಿಕೆ ಮುಂದಿಟ್ಟಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ