ಪೂರ್ಣಾವಧಿ ರಕ್ಷಣಾ ಸಚಿವರನ್ನು ನೇಮಕ ಮಾಡದ ಕೇಂದ್ರದ ವಿರುದ್ಧ ಶಿವಸೇನೆ ಕಿಡಿ

Published : May 12, 2017, 04:47 PM ISTUpdated : Apr 11, 2018, 01:05 PM IST
ಪೂರ್ಣಾವಧಿ ರಕ್ಷಣಾ ಸಚಿವರನ್ನು ನೇಮಕ ಮಾಡದ ಕೇಂದ್ರದ ವಿರುದ್ಧ ಶಿವಸೇನೆ ಕಿಡಿ

ಸಾರಾಂಶ

ಇದುವರೆಗೂ ಪೂರ್ಣಾವಧಿ ರಕ್ಷಣಾ ಸಚಿವರನ್ನು ನೇಮಕ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಕಿಡಿಕಾರಿದೆ.

ನವದೆಹಲಿ (ಮೇ.12): ಇದುವರೆಗೂ ಪೂರ್ಣಾವಧಿ ರಕ್ಷಣಾ ಸಚಿವರನ್ನು ನೇಮಕ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಕಿಡಿಕಾರಿದೆ.

ದೇಶದ ರಕ್ಷಣಾ ವಿಚಾರದಲ್ಲಿ ಕೇಂದ್ರ ಸರ್ಕಾರ ಆಟ ಆಡುತ್ತಿದೆ. ಕಳೆದ ಮೂರು ತಿಂಗಳಿಂದ ರಕ್ಷಣಾ ಸಚಿವರನ್ನು ಬದಲಾಯಿಸಿಲ್ಲ.  ಇನ್ನೂ ಪೂರ್ಣಾವಧಿ ರಕ್ಷಣಾ ಸಚಿವರ ನೇಮಕವಾಗಿಲ್ಲ. ಕೇಂದ್ರ ಸರ್ಕಾರ ದೇಶದ ರಕ್ಷಣಾ ವಿಚಾರದಲ್ಲಿ ಆಟವಾಡುತ್ತಿದೆಯೆಂದು ಶಿವಸೇನೆ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಿಕೊಂಡಿದೆ.

ಬಿಜೆಪಿಗೆ ಮತ ಹಾಕಿ ಅಧಿಕಾರಕ್ಕೆ ತಂದ ಜನರು ಇದಕ್ಕೆ ಜವಾಬ್ದಾರರು. ಜನರ ಈ ತಪ್ಪು ಆಯ್ಕೆಗೆ ಸೈನಿಕರು ಬೆಲೆ ತೆರಬೇಕಾಗಿದೆ ಎಂದು ಶಿವಸೇನೆ ಹೇಳಿದೆ. ಮನೋಹರ್ ಪರ್ರಿಕರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿಗೆ ಹೆಚ್ಚುವರಿಯಾಗಿ ರಕ್ಷಣಾ ಸಚಿವ ಸ್ಥಾನ ನೀಡಲಾಗಿದೆ.  

ಕಾಶ್ಮೀರದಲ್ಲಿ ಸೇನಾಧಿಕಾರಿ ಉಮರ್ ಫಯಾಜ್  ಹತ್ಯೆ  ವಿಚಾರದಲ್ಲಿ ಶಿವಸೇನೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌