
ಕೊಲಂಬೋ (ಮೇ.12): ಬುದ್ಧನ ಹುಟ್ಟು ಹಾಗೂ ಸಾವನ್ನು ನೆನಪಿಸುವ ಅಂತರಾಷ್ಟ್ರೀಯ ವೇಸಕ್ ದಿನದಂದು ಭಾರತ 16 ಸಾವಿರ ಕರಕುಶಲದಿಂದ ತಯಾರಿಸಿದ ಮೇಣದ ಬತ್ತಿಯನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡುವುದಾಗಿ ಭಾರತ ಘೋಷಿಸಿದೆ.
ಅಸ್ಸಾಂನ ದಿಗ್ಬಾಯ್’ನಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಶುದ್ದೀಕರಣ ಘಟಕದಲ್ಲಿ ಪ್ಯಾರಾಫಿನ್ ಮೇಣದಿಂದ ತಯಾರಿಸಲಾದ ವಿಶೇಷ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನರ್ ಗೆ ಮೇಣದ ಬತ್ತಿಯನ್ನು ರವಾನೆ ಮಾಡಲಾಗುವುದು.ಅವರು ಬುದ್ಧನ ದೇವಾಲಯಕ್ಕೆ ನೀಡಲಿದ್ದಾರೆ. ವೇಸಕ್ ದಿನದ ಪ್ರಯುಕ್ತ ಭಾರತದ ಜನತೆ ಶ್ರೀಲಂಕಾ ಜನತೆಗೆ 16 ಸಾವಿರ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.