ವೇಸಕ್ ದಿನದ ಪ್ರಯುಕ್ತ ಶ್ರೀಲಂಕಾಗೆ ಭಾರತದಿಂದ 16 ಸಾವಿರ ಮೇಣದಬತ್ತಿಗಳ ಉಡುಗೊರೆ

Published : May 12, 2017, 03:15 PM ISTUpdated : Apr 11, 2018, 12:51 PM IST
ವೇಸಕ್ ದಿನದ ಪ್ರಯುಕ್ತ ಶ್ರೀಲಂಕಾಗೆ ಭಾರತದಿಂದ 16 ಸಾವಿರ ಮೇಣದಬತ್ತಿಗಳ ಉಡುಗೊರೆ

ಸಾರಾಂಶ

ಬುದ್ಧನ ಹುಟ್ಟು ಹಾಗೂ ಸಾವನ್ನು ನೆನಪಿಸುವ ಅಂತರಾಷ್ಟ್ರೀಯ ವೇಸಕ್ ದಿನದಂದು ಭಾರತ 16 ಸಾವಿರ ಕರಕುಶಲದಿಂದ ತಯಾರಿಸಿದ ಮೇಣದ ಬತ್ತಿಯನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡುವುದಾಗಿ ಭಾರತ ಘೋಷಿಸಿದೆ.

ಕೊಲಂಬೋ (ಮೇ.12): ಬುದ್ಧನ ಹುಟ್ಟು ಹಾಗೂ ಸಾವನ್ನು ನೆನಪಿಸುವ ಅಂತರಾಷ್ಟ್ರೀಯ ವೇಸಕ್ ದಿನದಂದು ಭಾರತ 16 ಸಾವಿರ ಕರಕುಶಲದಿಂದ ತಯಾರಿಸಿದ ಮೇಣದ ಬತ್ತಿಯನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡುವುದಾಗಿ ಭಾರತ ಘೋಷಿಸಿದೆ.

ಅಸ್ಸಾಂನ ದಿಗ್ಬಾಯ್’ನಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಶುದ್ದೀಕರಣ ಘಟಕದಲ್ಲಿ ಪ್ಯಾರಾಫಿನ್ ಮೇಣದಿಂದ ತಯಾರಿಸಲಾದ ವಿಶೇಷ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನರ್ ಗೆ ಮೇಣದ ಬತ್ತಿಯನ್ನು ರವಾನೆ ಮಾಡಲಾಗುವುದು.ಅವರು ಬುದ್ಧನ ದೇವಾಲಯಕ್ಕೆ ನೀಡಲಿದ್ದಾರೆ. ವೇಸಕ್ ದಿನದ ಪ್ರಯುಕ್ತ ಭಾರತದ ಜನತೆ ಶ್ರೀಲಂಕಾ ಜನತೆಗೆ 16 ಸಾವಿರ ಮೇಣದ ಬತ್ತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌