ಆದಿತ್ಯನಾಥ್’ರನ್ನು ಗೂಂಡಾ ಎಂದು ಕರೆದ ಚಿತ್ರ ನಿರ್ಮಾಪಕ

By Suvarna Web DeskFirst Published Mar 23, 2017, 2:27 PM IST
Highlights

ಯೋಗಿ ಆದಿತ್ಯನಾಥರನ್ನು ಟ್ವೀಟರ್'ನಲ್ಲಿ ಗೂಂಡಾಗೆ ಹೋಲಿಸಿ ಟ್ವೀಟಿಸಿದ ಚಿತ್ರ ನಿರ್ಮಾಪಕ, ಬಳಿಕ ಟ್ವೀಟನ್ನು ತೆಗೆದು ಹಾಕಿದ್ದಾರೆ.

ನವದೆಹಲಿ (ಮಾ.23): ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರನ್ನು ಆಯ್ಕೆ ಮಾಡಿದ ಬಿಜೆಪಿ ಕ್ರಮವನ್ನು ಟ್ವೀಟರ್’ನಲ್ಲಿ ಟೀಕಿಸಿರುವ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಶಿರೀಶ್ ಕುಂದರ್, ಆದಿತ್ಯನಾಥರನ್ನು ಗೂಂಡಾ ಎಂದು ಬಣ್ಣಿಸಿದ್ದಾರೆ. ಬಳಿಕ ಆ ಟ್ವೀಟ್’ಗಳನ್ನು ಅಳಿಸಿಹಾಕಿದ್ದಾರೆ.

ಗೂಂಡಾನೊಬ್ಬನಿಗೆ ಆಡಳಿತ ಕೊಟ್ಟುಬಿಟ್ಟರೆ ಆತ ಗಲಭೆಗಳನ್ನು  ಸೃಷ್ಟಿಸುವುದನ್ನು ಬಿಟ್ಟುಬಿಡುತ್ತಾನೆಯೆಂದು ನಿರೀಕ್ಷಿಸುವುದು, ಅತ್ಯಾಚಾರ ಮಾಡಲು ಅತ್ಯಾಚಾರಿಗೆ ಅನುವುಮಾಡಿಕೊಟ್ಟರೆ ಆತ ಆತ್ಯಾಚಾರ ಮಾಡಲ್ಲವೆಂಬಂತಿದೆ, ಎಂದು ಕುಂದರ್ ಟ್ವೀಟಿಸಿದ್ದರು.

Latest Videos

ಆ ತರ್ಕದಂತೆ ಮುಂದುವರಿದು ಗೂಂಡಾನನ್ನು ಮುಖ್ಯಮಂತ್ರಿಯಾಗಿ ಮಾಡಿದರೆ,ದಾವೂದ್ ಇಬ್ರಾಹಿಂ’ನನ್ನು ಸಿಬಿಐ’ನ ಮುಖ್ಯಸ್ಥನಾಗಬಹುದು ಅಥವಾ ಮಲ್ಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಬಹುದು, ಎಂದು ಕುಂದರ್ ವ್ಯಂಗ್ಯವಾಡಿದ್ದರು. ಎಂದು ಏಎನ್ಐ ವರದಿ ಮಾಡಿದೆ.

click me!