ಗೋ ಹತ್ಯೆ ವಿರುದ್ಧ ಶಿಯಾ ಮಂಡಳಿ ಫತ್ವಾ

Published : Apr 05, 2017, 02:20 PM ISTUpdated : Apr 11, 2018, 12:47 PM IST
ಗೋ ಹತ್ಯೆ ವಿರುದ್ಧ ಶಿಯಾ ಮಂಡಳಿ ಫತ್ವಾ

ಸಾರಾಂಶ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿರುವ ಗೋ ವಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಿಸುತ್ತಿದ್ದು ಇನ್ನೊಂದು ಕಡೆ ಗೋವಧೆಯನ್ನು, ಗೋಮಾಂಸ ಸೇವನೆ ವಿರುದ್ಧ  ಶಿಯಾ ಮಂಡಳಿ ಫತ್ವಾ ಹೊರಡಿಸಿದೆ.

ಲಕ್ನೋ (ಏ.05): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿರುವ ಗೋ ವಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಿಸುತ್ತಿದ್ದು ಇನ್ನೊಂದು ಕಡೆ ಗೋವಧೆಯನ್ನು, ಗೋಮಾಂಸ ಸೇವನೆ ವಿರುದ್ಧ  ಶಿಯಾ ಮಂಡಳಿ ಫತ್ವಾ ಹೊರಡಿಸಿದೆ.

ಇರಾಕ್ ನಲ್ಲಿರುವ ಶಿಯಾ ಮಂಡಳಿ ಜೊತೆ ಮಾತುಕತೆ ನಡೆಸಿದ ಬಳಿಕ ಗೋವಧೆ, ಗೋಮಾಂಸ ಸೇವನೆ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಶಿಯಾ ಮಂಡಳಿ ಸದಸ್ಯ ಮೌಲಾನಾ ಯಾಸೂಬ್ ಅಬ್ಬಾಸ್ ಲಕ್ನೋದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಹೇಳಿದ್ದಾರೆ.

ನಾವು ಇರಾಕ್ ನಲ್ಲಿರುವ ಶಿಯಾ ಮಂಡಳಿಯ ಆಯಾತೊಲ್ಲಹ್ ಶೇಖ್ ಬಶೀರ್ ನಜಾಫಿಯವರಿಗೆ ಗೋಹತ್ಯೆ ವಿಚಾರವಾಗಿ ಪತ್ರ ಬರೆದಿದ್ದೇವೆ. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದು ಗೋ ಹತ್ಯೆ ವಿರುದ್ಧ ಫತ್ವಾ ಹೊರಡಿಸಲು ಹೇಳಿದ್ದಾರೆ ಎಂದು ಅಬ್ಬಾಸ್ ಹೇಳಿದ್ದಾರೆ.

ಗೋಹಂತಕರಿಂದ ದೇಶದಲ್ಲಿ ಆಗಾಗ ಕೋಮು ಗಲಭೆ ಉಂಟಾಗುವುದರಿಂದ ಈ ಫತ್ವಾ ಹೊರಡಿಸಲಾಗಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌
ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ