ಕವರ್ ಸ್ಟೋರಿ ಬಿಗ್ ಇಂಪ್ಯಾಕ್ಟ್ ;ನೀರಿನ ಹೆಸರಲ್ಲಿ ಹಗಲು ದರೋಡೆ ಮಾಡ್ತಿದ್ದ ಖದೀಮರಿಗೆ ಶಾಕ್!

Published : Apr 05, 2017, 12:47 PM ISTUpdated : Apr 11, 2018, 12:38 PM IST
ಕವರ್ ಸ್ಟೋರಿ ಬಿಗ್ ಇಂಪ್ಯಾಕ್ಟ್ ;ನೀರಿನ ಹೆಸರಲ್ಲಿ ಹಗಲು ದರೋಡೆ ಮಾಡ್ತಿದ್ದ ಖದೀಮರಿಗೆ ಶಾಕ್!

ಸಾರಾಂಶ

ಶುದ್ಧೀಕರಿಸಿದ ನೀರು ಎಂದು ಹೇಳಿ ತುಮಕೂರಿ‌ನಲ್ಲಿ ನೀರು ಸರಬರಾಜು ಮಾಡುತ್ತಿದ್ದಂತಹ ಖದೀಮರಿಗೆ ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ತಂಡ ಸಿಂಹಸ್ವಪ್ನವಾಗಿದೆ.

ಬೆಂಗಳೂರು (ಏ.05): ಶುದ್ಧೀಕರಿಸಿದ ನೀರು ಎಂದು ಹೇಳಿ ತುಮಕೂರಿ‌ನಲ್ಲಿ ನೀರು ಸರಬರಾಜು ಮಾಡುತ್ತಿದ್ದಂತಹ ಖದೀಮರಿಗೆ ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ತಂಡ ಸಿಂಹಸ್ವಪ್ನವಾಗಿದೆ.

ಕಳೆದ ವಾರ ಕವರ್​ ಸ್ಟೋರಿಯಲ್ಲಿ ಈ ಖದೀಮರ ಬಂಡವಾಳ ಬಯಲು ಮಾಡಲಾಗಿತ್ತು.  ಇದೀಗ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ತುಮಕೂರು ಮಹಾನಗರ  ಪಾಲಿಕೆ ಮೇಯರ್ ರವಿಕುಮಾರ್ ಅಧಿಕಾರಿಗಳನ್ನು ಕರೆದು ಅಕ್ರಮವಾಗಿ ನಡೆಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದರನ್ವಯ  ಘಟಕಗಳಿಗೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಮೊದಲಿಗೆ ನೀರಾಜ, ಎಂಡಿಎಂ, ಶಿವಶ್ರೀ, ಯಶ್ ಆಕ್ವಾ ಸೇರಿದಂತೆ ಅನೇಕ ಘಟಕಗಳಿಗೆ ಭೇಟಿ ನೀಡಿತು. 7 ದಿನಗಳಲ್ಲಿ ಉತ್ತರಿಸುವಂತೆ ಪಾಲಿಕೆಯಿಂದ ನೋಟೀಸ್ ಜಾರಿ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌