ತರೂರ್ ಕಚೇರಿಯಲ್ಲಿ ಹಿಂದೂ ಪಾಕಿಸ್ತಾನ ಬ್ಯಾನರ್

Published : Jul 16, 2018, 05:33 PM IST
ತರೂರ್ ಕಚೇರಿಯಲ್ಲಿ ಹಿಂದೂ ಪಾಕಿಸ್ತಾನ ಬ್ಯಾನರ್

ಸಾರಾಂಶ

ಯುವ ಮೋರ್ಚಾ ಬಿಜೆಪಿ ಸದಸ್ಯರಿಂದ ತರೂರ್ ಕಚೇರಿಗೆ ಕಪ್ಪು ಮಸಿ ಟ್ವಿಟರ್ ಮೂಲಕ ಘಟನೆಯನ್ನು ಖಂಡಿಸಿದ ಹಿರಿಯ ಕಾಂಗ್ರೆಸ್ ನಾಯಕ 

ನವದೆಹಲಿ[ಜು.16]: ಹಿಂದೂ ಪಾಕಿಸ್ತಾನ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ವಾರದ ನಂತರ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ತಿರುವನಂತಪುರ ಕಚೇರಿ ಮೇಲೆ ಕೆಲವು ಬಲಪಂಥೀಯ ಗುಂಪುಗಳ ಸದಸ್ಯರು ದಾಳಿ ನಡೆಸಿದ್ದಾರೆ.

ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ತರೂರ್, ಯುವ ಮೋರ್ಚಾ ಬಿಜೆಪಿ ಸದಸ್ಯರು ಇಂದು ನನ್ನ ಕಚೇರಿಗೆ ಆಗಮಿಸಿ ಕಚೇರಿಯ ತುಂಬೆಲ್ಲ ಕಪ್ಪು ಮಸಿಯನ್ನು ಸುರಿದು ಪಾಕಿಸ್ತಾನಕ್ಕೆ ತೆರಳು ಎಂಬ ಘೋಷಣೆ ಕೂಗುವುದರ ಜೊತೆಗೆ ಕಚೇರಿಯೊಳಗೆ ಹಿಂದೂ ಪಾಕಿಸ್ತಾನ ಎಂಬ ಘೋಷಣೆಯಿರುವ  ಬ್ಯಾನರ್ ಅನ್ನು ಕಟ್ಟಿದ್ದಾರೆ.  ಇದು ಪ್ರಜ್ಞಾವಂತ ಸಮುದಾಯವನ್ನು ಹಾದಿ ತಪ್ಪಿಸುವಂತ ನಡೆ’ಎಂದಿದ್ದಾರೆ.

ಕಳೆದ ಬುಧವಾರ  ಶಶಿ ತರೂರ್, 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದೂ ಪಾಕಿಸ್ತಾನವಾಗುವ ಜೊತೆಗೆ ಭಾರತ ಸಂವಿಧಾನವನ್ನು ನಾಶ ಮಾಡಲಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜು.14 ರಂದು ಕೋಲ್ಕತ್ತಾ ಹೈಕೋರ್ಟ್ ಈ ಹೇಳಿಕೆಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!
ನಿಮ್ಮ ಹೊಸ ಮನೆಗೆ ಪೇಂಟ್ ಮಾಡುವಾಗ ಈ 7 ತಪ್ಪು ಮಾಡಬೇಡಿ!