
ಅಹಮದಾಬಾದ್[ಸೆ.05]: ಗಾಂಜಾ ಗಿಡ ನೆಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸೇರಿದಂತೆ 7 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸಂಜೀವ್ ಭಟ್ ಅವರು 1998 ರಲ್ಲಿ ತಾವು ವಾಸವಿದ್ದ ಬಂಗಲೆಯ ಆವರಣದಲ್ಲಿ ಗಾಂಜಾ ಸಸಿಗಳನ್ನು ನೆಟ್ಟಿದ್ದರು. ಬಂಧಿತರಲ್ಲಿ ನಿವೃತ್ತ ಸಿಪಿಐ ಹಾಗೂ ಎಸ್ ಐ ಅವರೂ ಒಳಗೊಂಡಿದ್ದಾರೆ. ಆರಂಭಿಕ ಸಾಕ್ಷಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ನ್ಯಾಯಾಲಯ ಕೂಡ ತನಿಖೆ ನಡೆಸುವಂತೆ ಗುಜರಾತ್ ಸಿಐಡಿ ಅಪರಾಧ ವಿಭಾಗಗಕ್ಕೆ ಆದೇಶ ನೀಡಿತ್ತು. ಸಂಜೀವ್ ಭಟ್ ಅವರು 1998ರಲ್ಲಿ ತಾವು ವಾಸವಿದ್ದ ಮೇಮ್ ನಗರ ಪ್ರದೇಶದ ಬಂಗಲೆಯ ಆವರಣದಲ್ಲಿ ಗಾಂಜಾ ಸಸಿಗಳನ್ನು ನೆಟ್ಟಿದ್ದರು. ಆರೋಪಿಗಳೆಲ್ಲರನ್ನು ಡಿಜಿಪಿ ಕಚೇರಿಯ ನಿಷೇಧಿತ ಪ್ರದೇಶದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.