
ಮುಂಬೈ: ಹಿರಿಯ ನಾಗರಿಕರು ಅಥವಾ 70 ವರ್ಷ ಮೀರಿದ ವೃದ್ಧರು ಮತ್ತು ದಿವ್ಯಾಂಗರ ಸಮಸ್ಯೆಗಳನ್ನು ಅರಿತಿರುವ ಆರ್ಬಿಐ, ಡಿ.31ರ ಒಳಗೆ ವೃದ್ಧರು ಮತ್ತು ದಿವ್ಯಾಂಗರಿಗೆ ಅನುಕೂಲವಾಗುವ ರೀತಿ ಅವರ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ನೀಡುವಂತೆ ಎಲ್ಲ ಬ್ಯಾಂಕ್ಗಳಿಗೂ ಸೂಚಿಸಿದೆ.
ಈ ಬಗ್ಗೆ ಗುರುವಾರ ಸೂಚನೆ ಹೊರಡಿಸಿರುವ ಆರ್ಬಿಐ, ‘ಹಿರಿಯ ನಾಗರಿಕರು, ದೃಷ್ಟಿ ಹೀನರು ಮತ್ತು ನಡೆಯಲು ಕಷ್ಟಕರವಾದ ದಿವ್ಯಾಂಗರಿಗೆ ಅಗತ್ಯವಿರುವ ಹಣ, ಚೆಕ್ಬುಕ್ ಮತ್ತು ಡಿಡಿಗಳನ್ನು ಅವರ ಮನೆ ಬಾಗಿಲಿಗೇ ತೆಗೆದುಕೊಂಡು ಹೋಗಬೇಕು. ಈ ನಿಯಮಗಳನ್ನು ಡಿ.31ರೊಳಗೆ ಅನುಷ್ಠಾನಗೊಳಿಸಬೇಕು. ಅಲ್ಲದೆ, ಈ ಬಗ್ಗೆ ಬ್ಯಾಂಕ್ ಶಾಖೆ ಮತ್ತು ವೆಬ್ಸೈಟ್ಗಳ ಮೂಲಕ ಹೆಚ್ಚು ಜನಪ್ರಿಯತೆ ನೀಡಬೇಕು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.