
ಸದಾ ಸುದ್ದಿಯಲ್ಲಿರಲು ಬಯಸುವ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿಗೆ ಕಳೆದ ವಾರ ಅಮಿತ್ ಶಾ ಫೋನ್ ಮಾಡಿ ನನ್ನನ್ನೊಮ್ಮೆ ಭೇಟಿ ಮಾಡಿ ಎಂದು ಹೇಳಿದಾಗ ಭಾರೀ ಖುಷಿ ಆಗಿತ್ತಂತೆ.
ಅರುಣ್ ಜೇಟ್ಲಿಗೆ ಹುಷಾರಿಲ್ಲದೆ ಇರುವುದರಿಂದ ತನಗೆ ಹಣಕಾಸು ಇಲಾಖೆ ಕೊಡಬಹುದು ಎಂದು ಹುಮ್ಮಸ್ಸಿನಲ್ಲಿಯೇ ಶಾ ಭೇಟಿಗೆ ಹೋದ ಸ್ವಾಮಿ, ಚಹಾ ಕುಡಿದಾದ ಮೇಲೆ ತಾವೇ ಸಂಪುಟದ ವಿಷಯ ತೆಗೆದರಂತೆ.
ಕ್ಯಾಬಿನೆಟ್ ಮೋದಿಜಿ ನೋಡಿಕೊಳ್ಳುತ್ತಾರೆ, ನಿಮ್ಮನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದು ಶಾ ಹೇಳಿದರಂತೆ. ರಾಜ್ಯಪಾಲ ಎಂದರೆ ಬಾಯಿ ಮುಚ್ಚಿ ಕೂರಬೇಕಾಗುತ್ತದೆ, ನನಗೆ ಸಾಧ್ಯವಿಲ್ಲ ಎಂದು ಸ್ವಾಮಿ ನಿರಾಸೆ ಯಿಂದ ವಾಪಸ್ ಬಂದರಂತೆ. ಅಂದಹಾಗೆ ಅವರನ್ನು ರಾಜ್ಯಪಾಲ ಮಾಡುವ ಪ್ರಸ್ತಾಪ ಆರ್ಎಸ್ಎಸ್ ಕಡೆಯಿಂದ ಇತ್ತಂತೆ.
(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)
ಈ ಸುದ್ದಿಯನ್ನು ಓದಿ : ಕೋರ್ಟ್ ಹಾಲ್ ನಲ್ಲಿ ಪತ್ರಕರ್ತರಿಗೆ ಮೊಬೈಲ್ ಬಳಕೆಗೆ ಅವಕಾಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.