
ವಾಜಪೇಯಿ ಆರೋಗ್ಯ ವಿಚಾರಿಸಲೆಂದು ದೆಹಲಿಗೆ ಬಂದಿದ್ದ ದೇವೇಗೌಡರನ್ನು ಗುಲಾಂ ನಬಿ ಆಜಾದ್ ರಾಹುಲ್ ಗಾಂಧಿಯವರ ಇಫ್ತಾರ್ ಕೂಟಕ್ಕೆ ಎಷ್ಟೇ ಕರೆದರೂ ಬರಲಿಲ್ಲ. ಬೆಂಗಳೂರಿನಲ್ಲಿ ನಾವೂ ಇಟ್ಟುಕೊಂಡಿದ್ದೇವೆ, ನಮ್ಮ ಡ್ಯಾನಿಶ್ ಅಲಿ ನಿಮ್ಮ ಇಫ್ತಾರ್ಗೆ ಬರುತ್ತಾರೆ ಎಂದು ಹೇಳಿ ವಿಮಾನ ಹತ್ತಿ ಹೊರಟೇಬಿಟ್ಟರು.
ತಮ್ಮ ದೆಹಲಿ ಮನೆಯ ಹೊರಗಡೆ ನಿಂತಿದ್ದ ಕನ್ನಡದ ಪತ್ರಕರ್ತರಿಗೆ ‘ಅಯ್ಯೋ ದೆಹಲಿಯಲ್ಲೇನೂ ಕೆಲಸ ಇಲ್ಲ. ನನಗೀಗ ಬೆಂಗಳೂರಿನಲ್ಲಿ ಮಾಡಲು ತುಂಬಾ ಕೆಲಸವಿದೆ’ ಎಂದು ಮುಗುಮ್ಮಾಗಿ ನಗುತ್ತಲೇ ಹೊರಟರು. ಅಧಿಕಾರ ಇಲ್ಲದಿದ್ದಾಗ ದೆಹಲಿಗೆ ಬಂದು ಕನ್ನಡ ಮಾಧ್ಯಮಗಳನ್ನು ಕರೆದು ಗೌಡರು ಗಂಟೆಗಟ್ಟಲೆ ಗೌಡರು ಮಾತನಾಡಿಸುತ್ತಿದ್ದುದುಂಟು.
(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.