ಮೈಸೂರು ದಸರಾದಲ್ಲಿ 'ತೇರಿ ಮೇರಿ' ಸಿಂಗರ್ ರಾನು ಮಂಡಾಲ್ ಕಾರ್ಯಕ್ರಮ ರದ್ದು

Published : Oct 01, 2019, 05:14 PM IST
ಮೈಸೂರು ದಸರಾದಲ್ಲಿ 'ತೇರಿ ಮೇರಿ' ಸಿಂಗರ್ ರಾನು ಮಂಡಾಲ್ ಕಾರ್ಯಕ್ರಮ ರದ್ದು

ಸಾರಾಂಶ

ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ | ತೇರಿ ಮೇರಿ ಖ್ಯಾತಿಯ ಸಿಂಗರ್ ರಾನು ಮಂಡಾಲ್ ಯುವ ದಸರಾ ಕಾರ್ಯಕ್ರಮಕ್ಕೆ ಬರಬೇಕಿತ್ತು | ಅನಾರೋಗ್ಯ ನಿಮಿತ್ತ ಮೈಸೂರಿಗೆ ಆಗಮಿಸುತ್ತಿಲ್ಲ 

ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಭಾಗವಾದ ಯುವ ದಸರಾದಲ್ಲಿ ಇಂದು ಕಾರ್ಯಕ್ರಮ ನೀಡಬೇಕಿದ್ದ ಇಂಟರ್ನೆಟ್ ಸೆನ್ಸೇಷನ್ ಸಿಂಗರ್ ರಾನು ಮಂಡಾಲ್ ಕಾರ್ಯಕ್ರಮ ರದ್ದಾಗಿದೆ. ರಾನು ಮಂಡಾಲ್ ದಿಢೀರ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೈಸೂರಿಗೆ ಆಗಮಿಸುತ್ತಿಲ್ಲ.  

ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

ಮೈಸೂರು ದಸರಾ ಹಬ್ಬದ ಅಂಗವಾಗಿ ಯುವ ದಸರಾ ಉದ್ಘಾಟನೆ ದಿನವಾದ ಇಂದು ರಾನು ಮಂಡಲ್ ಆಹ್ವಾನಿಸಿ ಕಾರ್ಯಕ್ರಮ ನೀಡಲು ಈ ಬಾರಿ ಮೈಸೂರು ಜಿಲ್ಲಾಡಳಿತ ಸಜ್ಜಾಗಿತ್ತು. ಮನೆಯಿಂದ ಕೋಲ್ಕತ್ತಾ ಏರ್ ಪೋರ್ಟ್ ಗೆ ಬರುವಾಗ ಅತಿಯಾದ ವಾಂತಿಯಾದ ಕಾರಣ ರಾನು ಮಂಡಾಲ್ ಬಂಗಾಳದಲ್ಲೇ ಉಳಿದುಕೊಂಡಿದ್ದಾರೆ.

ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೇ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂಡಾಲ್. ಇವರಲ್ಲಿರುವ ಟ್ಯಾಲೆಂಟ್ ನೋಡಿ ಸಿಂಗರ್ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ. 

ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂಡಾಲ್; ಯಾರೀಕೆ?

ಹಿಮೇಶ್ ರೇಶಮಿಯಾ ಮುಂಬರುವ ಸಿನಿಮಾ ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಸಿನಿಮಾದಲ್ಲಿ ತೇರಿ ಮೇರಿ ಕಹಾನಿ ಎನ್ನುವ ಹಾಡನ್ನು ಹಾಡಲು ಇವರಿಗೆ ಅವಕಾಶ ಕೊಟ್ಟಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸ್ಫೋಟಕ ಇರುವ ಶಂಕೆ : ಲಂಡನ್‌ನಲ್ಲಿ ಪಾಕ್‌ ಸಚಿವ ಕಾರು ತಪಾಸಣೆ