ಗಂಗೆಗೆ ಜೀವಂತ ವ್ಯಕ್ತಿಯ ಮಾನ್ಯತೆಗೆ ಸುಪ್ರೀಂ ತಡೆ

Published : Jul 07, 2017, 02:27 PM ISTUpdated : Apr 11, 2018, 01:10 PM IST
ಗಂಗೆಗೆ ಜೀವಂತ ವ್ಯಕ್ತಿಯ ಮಾನ್ಯತೆಗೆ ಸುಪ್ರೀಂ ತಡೆ

ಸಾರಾಂಶ

ಗಂಗಾ ಮತ್ತು ಯಮುನಾ ನದಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡುವ ಉತ್ತರಾಖಂಡ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ. ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಜೀವಂತ ವ್ಯಕ್ತಿಯ ದರ್ಜೆ ನೀಡಿ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು.

ನವದೆಹಲಿ: ಗಂಗಾ ಮತ್ತು ಯಮುನಾ ನದಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡುವ ಉತ್ತರಾಖಂಡ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.

ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಜೀವಂತ ವ್ಯಕ್ತಿಯ ದರ್ಜೆ ನೀಡಿ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು.

ನದಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡಿದಲ್ಲಿ, ಅವುಗಳಿಂದಾಗುವ ನೆರೆ ಸಂಬಂಧಿ ಕಷ್ಟ-ನಷ್ಟಗಳಿಗೆ ಮುಖ್ಯ ಕಾರ್ಯದರ್ಶಿಯ ವಿರುದ್ಧ ಸಂತ್ರಸ್ತರು ದೂರು ಸಲ್ಲಿಸಬಹುದು, ಹಾಗಾಗಿ ಹಣಕಾಸಿನ ಹೊರೆ ರಾಜ್ಯ ಸರ್ಕಾರದ ಮೇಲೆ ಬೀಳಲಿದೆ ಎಂದು ಉತ್ತರಾಖಂಡ ರಾಜ್ಯವು ವಾದಿಸಿದೆ.

ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಕಾನೂನಾತ್ಮಕವಾಗಿ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಬೇಕೆಂದು ಕಳೆದ ಮಾ.20ರಂದು ಉತ್ತರಾಖಂಡ ಹೈಕೋರ್ಟ್ ಆದೇಶಿಸಿತ್ತು. ನಮಮಿ ಗಂಗೆ ಯೋಜನೆಯ ನಿರ್ದೇಶಕರು, ಉತ್ತರಾಖಂಡ ರಾಜ್ಯದ ಎಡ್ವೋಕೇಟ್ ಜನರಲ್ ಹಾಗೂ ಮುಖ್ಯ ಕಾರ್ಯದರ್ಶಿಯವರು ‘ಕಾನೂನಾತ್ಮಕ ಪೋಷಕ’ರಾಗಿರುವರು ಕೋರ್ಟ್ ಹೇಳಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗ್ಳೂರು ಕಂಪನಿಯಿಂದ 3 ಲಕ್ಷಲಂಚ: ಸಿಬಿಐನಿಂದ ಲೆ.ಕರ್ನಲ್‌ ಬಂಧನ, ಬೆಚ್ಚಿಬೀಳಿಸುವ ಭ್ರಷ್ಟಾಚಾರ ಬಯಲು!
ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ