‘ಯೆಚೂರಿ ತಮ್ಮ ಹೆಸರು ಬಾಬರ್ ಅಥವಾ ಅಫ್ಜಲ್ ಎಂದು ಬದಲಿಸಿಕೊಳ್ಳಲಿ’!

Published : May 05, 2019, 02:41 PM ISTUpdated : May 05, 2019, 02:48 PM IST
‘ಯೆಚೂರಿ ತಮ್ಮ ಹೆಸರು ಬಾಬರ್ ಅಥವಾ ಅಫ್ಜಲ್ ಎಂದು ಬದಲಿಸಿಕೊಳ್ಳಲಿ’!

ಸಾರಾಂಶ

ರಾಮಾಯಣ, ಮಹಾಭಾರತದಲ್ಲಿ ಹಿಂಸಾಚಾರವೇ ತುಂಬಿದೆ ಎಂದಿದ್ದ ಯೆಚೂರಿ| ಸೀತಾರಾಂ ಯೆಚೂರಿಗೆ ತಿರುಗೇಟು ನೀಡಿದ ಶಿವಸೇನಾ ನಾಯಕ ಸಂಜಯ್ ರಾವತ್| ‘ಯೆಚೂರಿ ತಮ್ಮ ಹೆಸರನ್ನು ಬಾಬರ್ ಅಥವಾ ಅಫ್ಜಲ್ ಎಂದು ಬದಲಿಸಿಕೊಳ್ಳಲಿ’|

ಮುಂಬಯಿ(ಮೇ.05): ರಾಮಾಯಣ ಮತ್ತು ಮಹಾಭಾರತದಲ್ಲಿ ಕೇವಲ ಹಿಂಸಾಚಾರವೇ ತುಂಬಿದೆ ಎಂದು ಹೇಳಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ ಶಿವಸೇನಾ ನಾಯಕ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ.

ಹಿಂದೂ ಧರ್ಮದಲ್ಲಿ ಹಿಂಸಾಚಾರ ಇದೆ ಎಂದಾದರೆ ಸೀತಾರಾಮ ಯೆಚೂರಿ ತಮ್ಮ ಹೆಸರನ್ನು ಬಾಬರ್ ಅಥವಾ ಅಪ್ಜಲ್ ಎಂದು ಬದಲಿಸಿಕೊಳ್ಳಲಿ ಸಂಜಯ್ ರಾವತ್ ಹೇಳಿದ್ದಾರೆ.

ರಾಮಾಯಣ ಮತ್ತು ಮಹಾಭಾರತ ಮಹಾಗ್ರಂಥಗಳ ಕುರಿತು ಯೆಚೂರಿಗೆ ಗೌರವ ಇಲ್ಲವಾದರೆ, ತಮ್ಮ ಹೆಸರನ್ನು ಬಾಬರ್, ಅಪ್ಝಲ್ ಖಾನ್, ಔರಂಗ್ ಜೇಬ್ ಅಥವಾ ಚೆಂಗಿಸ್ ಖಾನ್ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ.

ಈ ಮಧ್ಯೆ ಹಿಂದೂ ಧರ್ಮಗ್ರಂಥಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಸೀತಾರಾಂ ಯೆಚೂರಿ ವಿರುದ್ಧ ದೂರು ದಾಖಲಿಸಲಾಗಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ