ಅಗಲಿದ ಅಂಬಿ: ರೈಲಿಗೆ ತಲೆಕೊಟ್ಟು ಅಭಿಮಾನಿ ಆತ್ಮಹತ್ಯೆ

By Web DeskFirst Published Nov 25, 2018, 12:41 PM IST
Highlights

ಇಡೀ ಕರುನಾಡೇ ಅಂಬಿಯನ್ನು ಕಳೆದುಕೊಂಡಿರುವ ದುಃಖದಲ್ಲಿದೆ. ಹೀಗಿರುವಾಗ ಅಂಬಿಯನ್ನು ಕಳೆದುಕೊಂಡ ನೋವು ತಡೆಯಲಾರದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ಸಾವನ್ನಪ್ಪಿದ್ದಾರೆ. ಮಂಡ್ಯದ ಗಂಡು ಎಂದೇ ಖ್ಯಾತರಾಗಿದ್ದ ಅಂಬಿ ತಮ್ಮದೇ ಆದ ಅಪಾರ ಅಭಿಮಾನಿ ವರ್ಗ ಹೊಂದಿದ್ದರು. ಆದರೀಗ ಈ ಎಲ್ಲರನ್ನೂ ಬಿಟ್ಟು ಅವರು ಇಹಲೋಕ ತ್ಯಜಿಸಿದ್ದಾರೆ. ಇಡೀ ಕರುನಾಡೇ ಅಂಬಿಯನ್ನು ಕಳೆದುಕೊಂಡಿರುವ ದುಃಖದಲ್ಲಿದೆ. ಹೀಗಿರುವಾಗ ಅಂಬಿಯನ್ನು ಕಳೆದುಕೊಂಡ ನೋವು ತಡೆಯಲಾರದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ನಿನಗೆ ತುಂಬಾ ಕೊಬ್ಬು ಕಣೇ... ಅಂಬಿ ಪಂಚ್ ನೆನೆದು ಭಾವುಕರಾದ ನಟಿ

ಹೌದು ಅಂಬರೀಶ್ ಅಭಿಮಾನಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ, ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮಯ್ಯ ಹೆಸರಿನ ಅಭಿಮಾನಿತಯೇ ರೈಲಿಗೆ ತಲೆಜಕೊಟ್ಟು ಮೃತ ಪಟ್ಟ ವ್ಯಕ್ತಿ. ಮೃತನಿಗೆ ಹೆಮಡತಿ ಸುಧಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

click me!