ಕಲ್ಬುರ್ಗಿ ಗೌರಿ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆ?

Published : Sep 15, 2017, 11:32 AM ISTUpdated : Apr 11, 2018, 12:51 PM IST
ಕಲ್ಬುರ್ಗಿ ಗೌರಿ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆ?

ಸಾರಾಂಶ

2013ರ ಆಗಸ್ಟ್ 30 ರಂದು ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಮೇಲೆ 7.65 ಎಂಎಂ ಪಿಸ್ತೂಲ್‌'ನಿಂದ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದಾದ 2015ರ ಫೆಬ್ರವರಿ 16 ರಂದು ಕೊಲ್ಲಾಪುರದಲ್ಲಿ ಪ್ರಗತಿ ಪರ ಚಿಂತಕ ಗೋವಿಂದ ಪಾನ್ಸರೆ ಮತ್ತು ಅವರ ಪತ್ನಿ ಉಮಾ ಮೇಲೆ ಕಿಡಿಗೇಡಿಗಳು ಐದು ಸುತ್ತು ಗುಂಡು ಹಾರಿಸಿದ್ದರು. ಆಗ ಘಟನಾ ಸ್ಥಳದಲ್ಲಿ ಪತ್ತೆಯಾದ ಕಾರ್ಟ್ರಿಜ್ ಹಾಗೂ ಗುಂಡುಗಳನ್ನು ಪರೀಕ್ಷಿಸಿದ ಮಹಾರಾಷ್ಟ್ರದ ಎಫ್'ಎಸ್‌ಎಲ್ ತಜ್ಞರು, ಉಮಾ ಮತ್ತು ನರೇಂದ್ರ ದಾಭೋಲ್ಕರ್ ಮೇಲೆ ಒಂದೇ ಪಿಸ್ತೂಲ್‌'ನಿಂದ ಗುಂಡು ಹಾರಿಸಲಾಗಿದೆ ಎಂದು ವರದಿ ನೀಡಿದ್ದರು.

ಬೆಂಗಳೂರು(ಸೆ.15): 2013ರ ಆಗಸ್ಟ್ 30 ರಂದು ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಮೇಲೆ 7.65 ಎಂಎಂ ಪಿಸ್ತೂಲ್‌'ನಿಂದ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದಾದ 2015ರ ಫೆಬ್ರವರಿ 16 ರಂದು ಕೊಲ್ಲಾಪುರದಲ್ಲಿ ಪ್ರಗತಿ ಪರ ಚಿಂತಕ ಗೋವಿಂದ ಪಾನ್ಸರೆ ಮತ್ತು ಅವರ ಪತ್ನಿ ಉಮಾ ಮೇಲೆ ಕಿಡಿಗೇಡಿಗಳು ಐದು ಸುತ್ತು ಗುಂಡು ಹಾರಿಸಿದ್ದರು. ಆಗ ಘಟನಾ ಸ್ಥಳದಲ್ಲಿ ಪತ್ತೆಯಾದ ಕಾರ್ಟ್ರಿಜ್ ಹಾಗೂ ಗುಂಡುಗಳನ್ನು ಪರೀಕ್ಷಿಸಿದ ಮಹಾರಾಷ್ಟ್ರದ ಎಫ್'ಎಸ್‌ಎಲ್ ತಜ್ಞರು, ಉಮಾ ಮತ್ತು ನರೇಂದ್ರ ದಾಭೋಲ್ಕರ್ ಮೇಲೆ ಒಂದೇ ಪಿಸ್ತೂಲ್‌'ನಿಂದ ಗುಂಡು ಹಾರಿಸಲಾಗಿದೆ ಎಂದು ವರದಿ ನೀಡಿದ್ದರು.

ಅಂದು ಗುಂಡಿನ ದಾಳಿಗೊಳಗಾಗಿದ್ದ ಉಮಾ ಅವರು ಪ್ರಾಣಾಪಾಯದಿಂದ ಸುರಕ್ಷಿತವಾದರೆ, ಐದು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಪಾನ್ಸರೆ ಕೊನೆಯುಸಿರೆಳೆದಿದ್ದರು. ಈ ಹತ್ಯೆಗಳು ಮರೆಯುವ ಮುನ್ನವೇ 2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದ ತಮ್ಮ ನಿವಾಸದಲ್ಲೇ ಹಿರಿಯ ಸಂಶೋಧಕ ಕಲ್ಬುರ್ಗಿ ಅವರು ಆಗಂತುಕರ ಗುಂಡೇಟಿಗೆ ಬಲಿಯಾದರು. ಆಗ ಪಾನ್ಸರೆ ಹಾಗೂ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದ ತನಿಖಾ ತಂಡಗಳಿಂದ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು, ಆ ಎರಡು ಕೊಲೆಗೂ ಕಲ್ಬುರ್ಗಿ ಅವರ ಸಾಮ್ಯತೆ ಬಗ್ಗೆ ತಿಳಿದುಕೊಳ್ಳಲು ಎಫ್'ಎಸ್‌ಎಲ್ ಮೊರೆ ಹೋಗಿದ್ದರು. ಮತ್ತೆ ಕಲ್ಬುರ್ಗಿ ಅವರ ಮನೆಯಲ್ಲಿ ಸಿಕ್ಕಿದ್ದ ಮೂರು ಗುಂಡುಗಳು ಹಾಗೂ ಪಾನ್ಸರೆ ಅವರ ಹತ್ಯೆಯಲ್ಲಿ ಸಿಕ್ಕಿದ್ದ ಮೂರು ಗುಂಡುಗಳು ಪರೀಕ್ಷೆಯಲ್ಲಿ ಹೊಂದಾಣಿಕೆಯಾಗಿದ್ದು, ಅವುಗಳು ಮತ್ತೆ ಒಂದೇ ಪಿಸ್ತೂಲ್‌'ನಿಂದಲೇ ಹಾರಿರುವುದನ್ನು ತಜ್ಞರು ಖಚಿತಪಡಿಸಿದ್ದರು ಎಂದು ತಿಳಿದು ಬಂದಿದೆ.

ಗೌರಿ ಕೊಲೆ ಪ್ರಕರಣದ ತನಿಖೆಗಿಳಿದಿರುವ ಎಸ್‌ಐಟಿ ತಂಡವು, ಸಿಐಡಿ ಅವರ ಬಳಿ ಇದ್ದ ಕಲ್ಬುರ್ಗಿ ಅವರ ದೇಹ ಹೊಕ್ಕಿದ್ದ ಗುಂಡುಗಳನ್ನು ವಶಕ್ಕೆ ಪಡೆದು ಎಫ್'ಎಸ್‌ಎಲ್‌ಗೆ ಕಳುಹಿಸಿತ್ತು. ಅದನ್ನು ಪರೀಕ್ಷಿಸಿದ ಬ್ಯಾಲಿಸ್ಟಿಕ್ ತಜ್ಞರು, ಎರಡು ಕೃತ್ಯಗಳಿಗೂ ಒಂದೇ ವೆಪನ್ ಬಳಕೆಯಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಮಾಹಿತಿ ಪಡೆದ ಎಸ್‌ಐಟಿ ಅಧಿಕಾರಿಗಳು, ಮಹಾರಾಷ್ಟ್ರದ ಎಸ್‌ಐಟಿ ಮತ್ತು ಸಿಬಿಐ ಅಧಿಕಾರಿಗಳನ್ನು ಸಂಪರ್ಕಿಸಿ ಸಮಾಲೋಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ
ಜಪಾನ್‌ ಹಿಂದಿಕ್ಕಿದ ಭಾರತ ಈಗ 4ನೇ ದೊಡ್ಡ ಆರ್ಥಿಕತೆ ಹಿರಿಮೆ