ಕಾಂಗ್ರೆಸ್'ನ ಪ್ರಭಾವಿ ನಾಯಕರಿಗೆ ಗಾಳ ಹಾಕಿದೆ ಬಿಜೆಪಿ?: ಪಟ್ಟಿಯಲ್ಲಿರುವ 'ಕೈ' ನಾಯಕರು ಯಾರ್ಯಾರು ಗೊತ್ತಾ?

Published : Sep 15, 2017, 11:11 AM ISTUpdated : Apr 11, 2018, 01:05 PM IST
ಕಾಂಗ್ರೆಸ್'ನ ಪ್ರಭಾವಿ ನಾಯಕರಿಗೆ ಗಾಳ ಹಾಕಿದೆ ಬಿಜೆಪಿ?: ಪಟ್ಟಿಯಲ್ಲಿರುವ 'ಕೈ' ನಾಯಕರು ಯಾರ್ಯಾರು ಗೊತ್ತಾ?

ಸಾರಾಂಶ

ಕಾಂಗ್ರೆಸ್ ನ ಕೆಲ ಪ್ರಮುಖ ಮುಖಂಡರಿಗೆ ಬಿಜೆಪಿ ಗಾಳ ಹಾಕಲು ತಯಾರಾಗಿದೆ ಎನ್ನುವ ಮಾತು ಜೋರಾಗಿದೆ. ಕೆಲ ಪ್ರಮುಖ  ಹಾಲಿ ಸಚಿವರು ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನ ಚುನಾವಣೆ ಸಮಯದಲ್ಲಿ ಕಮಲ ಪಡೆ ತನ್ನ ತೆಕ್ಕೆಗೆ ಸೆಳೆಯಲು ಅಗತ್ಯವಿರುವ ಸಿದ್ಧತೆ ಮತ್ತು ಮಾತುಕತೆ ನಡೆಸಿದೆ ಎನ್ನಲಾಗಿದೆ.

ಬೆಂಗಳೂರು(ಸೆ.15): ಕಾಂಗ್ರೆಸ್ ನ ಕೆಲ ಪ್ರಮುಖ ಮುಖಂಡರಿಗೆ ಬಿಜೆಪಿ ಗಾಳ ಹಾಕಲು ತಯಾರಾಗಿದೆ ಎನ್ನುವ ಮಾತು ಜೋರಾಗಿದೆ. ಕೆಲ ಪ್ರಮುಖ  ಹಾಲಿ ಸಚಿವರು ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನ ಚುನಾವಣೆ ಸಮಯದಲ್ಲಿ ಕಮಲ ಪಡೆ ತನ್ನ ತೆಕ್ಕೆಗೆ ಸೆಳೆಯಲು ಅಗತ್ಯವಿರುವ ಸಿದ್ಧತೆ ಮತ್ತು ಮಾತುಕತೆ ನಡೆಸಿದೆ ಎನ್ನಲಾಗಿದೆ.

ಬಿಜೆಪಿ ಸೆಳೆತಕ್ಕೆ ಒಳಗಾಗುವ ಕೈ ಮುಖಂಡರ ಪಟ್ಟಿ ದೊಡ್ಡದಾಗಿದ್ದು, ಅವರ ಹೆಸರು ಕೇಳಿದರೆ ಆಶ್ಚರ್ಯವಾಗೋದಂತೂ ಖಚಿತ. ಪ್ರಮುಖವಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಮತ್ತು ಪಕ್ಷದ ಹಿರಿಯ ಮುಖಂಡ ಆರ್ ವಿ ದೇಶಪಾಂಡೆ, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಇಂಧನ ಸಚಿವ ಡಿ ಕೆ ಶಿವಕುಮಾರ್ ಇದರ ಜೊತೆಗೆ ಹಿರಿಯ ಶಾಸಕರಾದ ಎ ಬಿ ಮಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ, ಹಂಪನಗೌಡ ಬಾದರ್ಲಿ, ಸಿ ಪಿ ಯೋಗೀಶ್ವರ್, ಡಾ.ಸುಧಾಕರ್, ಶಿವಾನಂದ ಪಾಟೀಲ್ ಸೇರಿ ಇತರೆ ಮುಖಂಡರಿಗೆ ಬಿಜೆಪಿ ಗಾಳ ಹಾಕಲಿದೆ ಎನ್ನಲಾಗಿದೆ. ಅಲ್ಲದೇ, ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಕೆಲವರಿಗೆ ಏನ್ರಿ ಬಿಜೆಪಿಗೆ ಹೋಗ್ತಾ ಇದ್ದೀರಾ ಅಂತಾ ವಿಚಾರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?
2026ರಲ್ಲೇ ಮಾತನಾಡುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?