
ವಡೋದರ : ಪಾನೀಪುರಿ ಅಂದರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ, ಅವುಗಳನ್ನು ತಯಾರಿಸುವಾಗ ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆ ಯನ್ನು ಕಾಪಾಡದೇ ಇರುವ ಕಾರಣಕ್ಕೆ ಗುಜರಾತಿನ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಪಾನೀಪುರಿ ಅಥವಾ ಗೋಲ್ಗಪ್ಪಾ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.
ಮಳೆಗಾಲದಲ್ಲಿ ಜನರು ರಸ್ತೆ ಬದಿಯ ಪಾನೀಪುರಿಗಳನ್ನು ಸೇವಿಸಿ ಟೈಫಾಯ್ಡ್, ಜಾಂಡೀಸ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸುಮಾರು 50 ಪಾನೀಪುರಿ ಅಂಡಿಗಳ ಮೇಲೆ ದಾಳಿ ನಡೆಸಿ 4,000 ಕೆ.ಜಿ. ಪುರಿ, 3,500 ಕೆ.ಜಿ. ಕೊಳೆತ ಆಲೂಗಡ್ಡೆ ಹಾಗೂ ಕಾಬೂಲ್ ಕಡಲೆ ಹಾಗೂ 1,200 ಪಾನಿಯನ್ನು ಅಧಿಕಾರಿಗಳು ಚರಂಡಿಗೆ ಚೆಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.