
ಬೆಂಗಳೂರು (ಫೆ.11): ಉದ್ಯಮಿ ಸಚಿನ್ ನಾಯಕ್ ರಿಂದ ಮೋಸ ಹೋದ ಐನೂರಕ್ಕೂ ಹೆಚ್ಚು ಮಂದಿ ಇಂದು ಮಡಿವಾಳ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಮಡಿವಾಳದಲ್ಲಿ ಮೋಸ ಹೋದವರೊಂದಿಗೆ ಇಂದು ಸಭೆ ನಡೆಸಿದ್ದ ಸಚಿನ್ ನಾಯ್ಕ್ ಮತ್ತು ಪತ್ನಿ ದಿಶಾ ಚೌದರಿ ಹಣ ವಾಪಸ್ ಕೊಡುವುದಾಗಿ ಹೇಳಿ ಸಭೆಯಿಂದ ಮಧ್ಯದಲ್ಲೇ ಪರಾರಿಯಾಗಿದ್ದಾನೆ.
ಟಿಜಿಎಸ್ ಕಂಪನಿ ಹೆಸರಿನಲ್ಲಿ ಕೊಟ್ಯಂತರ ಹಣ ಸಂಗ್ರಹಿಸಿದ್ದ ಸಚಿನ್ ನಾಯ್ಕ್,. 45 ದಿನಗಳಲ್ಲಿ ಎಲ್ಲರ ಹಣ ವಾಪಸ್ ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಸಚಿನ್ ನಾಯ್ಕ್ ಜೊತೆ ಮೋಸ ಹೋದವರು ಜಗಳಕ್ಕೆ ನಿಂತಾಗ ಊಟದ ನೆಪದಲ್ಲಿ ಪರಾರಿಯಾದ ಸಚಿನ್ ನಾಯ್ಜ್ ಮತ್ತು ಆತನ ಪತ್ನಿ ದಿಶಾ ಪರಾರಿಯಾಗಿದ್ದಾರೆ.
ಮೋಸಹೋದ ಐನೂರಕ್ಕೂ ಹೆಚ್ಚು ಮಂದಿಯಿಂದ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.