
ವಿಜಯವಾಡದ ಕಿಶೋರಿ ಲಾಲ್ ಎಂಬಾತನದ್ದು ಅಂಗಡಿಯಿಂದ ಅಂಗಡಿಗೆ ತೆರಳಿ ಚಾಕಲೇಟ್ ಮಾರುವ ಸಣ್ಣ ಕೆಲಸ. ಆದರೆ ಖಾತೆಯಲ್ಲಿ ನೋಡಿದರೆ ಭರ್ಜರಿ 18 ಕೋಟಿ ರು. ಹಣ. ಅನುಮಾನಗೊಂಡ ಆದಾಯ ತೆರಿಗೆ ಇಲಾಖೆ ಆತನಿಗೆ ಸಮನ್ಸ್ ನೀಡಿದೆ.
ಸಮನ್ಸ್ ಸಿಕ್ಕ ಬಳಿಕವಷ್ಟೇ ಕಿಶೋರಿ ಲಾಲ್ಗೆ ತನ್ನ ಖಾತೆಯಲ್ಲಿ ಇಷ್ಟುಹಣ ಇರುವುದು ಕಂಡುಬಂದಿದೆ. ಪ್ರಾಥಮಿಕ ತನಿಖೆ ವೇಳೆ ಮುಂಬೈನಿಂದ ಆನ್ಲೈನ್ ಮೂಲಕವೇ ಕಿಶೋರಿ ಲಾಲ್ ಖಾತೆಯಲ್ಲಿ ಹಣದ ವ್ಯವಹಾರ ನಡೆಸಿರುವುದು ಕಂಡುಬಂದಿದೆ. ಹೀಗಾಗಿ ಐಟಿ ಅಧಿಕಾರಿಗಳು ಬ್ಯಾಂಕ್ನ ಸಿಸಿಟೀವಿ ದೃಶ್ಯಾವಳಿಗಳನ್ನು ನೀಡುವಂತೆ ಬ್ಯಾಂಕ್'ಗೆ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.