ಜೈಲಲ್ಲಿದ್ದುಕೊಂಡೇ ಕಿಡ್ನಾಪ್; ರೌಡಿ ನಟರಾಜ್ ಟೀಂ ಅಂದರ್

Published : Jun 26, 2019, 12:15 PM ISTUpdated : Jun 26, 2019, 12:16 PM IST
ಜೈಲಲ್ಲಿದ್ದುಕೊಂಡೇ ಕಿಡ್ನಾಪ್; ರೌಡಿ ನಟರಾಜ್  ಟೀಂ ಅಂದರ್

ಸಾರಾಂಶ

ಬೆಂಗಳೂರಿನ ಕೆ ಪಿ ಅಗ್ರಹಾರ ರೌಡಿಯ ಐನಾತಿ ಐಡಿಯಾ..! ನಟರಾಜ ಅಲಿಯಾಸ್ ಮುಳ್ಳು ಕಿಡ್ನಾಪ್ ಕಹಾನಿ | 

ಜೈಲಿನಲ್ಲೇ ಇದ್ದುಕೊಂಡು ಚೇಲಾಗಳಿಗೆ ಚಮಕ್ ಕೊಡ್ಸಿ ಸುಲಿಗೆ ಮಾಡುತ್ತಿದ್ದ ರೌಡಿ ನಟರಾಜ್ ಅಲಿಯಾಸ್ ಮುಳ್ಳು ಟೀಂ ಅಂದರ್ ಆಗಿದೆ. 

ಬೆಂಗಳೂರಿನ ಕೆ ಪಿ ಅಗ್ರಹಾರ ರೌಡಿ ನಟರಾಜ್ ಐನಾತಿ ಐಡಿಯಾ ಬೆಳಕಿಗೆ ಬಂದಿದೆ. ಜೈಲಿನಲ್ಲೇ ಇದ್ದುಕೊಂಡು ಕಾಂಟ್ರ್ಯಾಕ್ಟರ್ ಶಾಂತಕುಮಾರ್ ಕಿಡ್ನಾಪ್ ಮಾಡಿಸಿದ್ದ ರೌಡಿ ಮುಳ್ಳು. ಚೇಲಗಳಾದ ಕಾರ್ತಿಕ್, ಭೈರೇಗೌಡ, ಸುರೇಶ್ ಸೇರಿದಂತೆ ಐವರು ಆರೋಪಿಗಳು ಮುಳ್ಳುಗೆ ಸಾಥ್ ನೀಡಿದ್ದಾರೆ. 

ಶಾಂತಕುಮಾರ್ ರನ್ನು ಕಿಡ್ನಾಪ್ ಮಾಡಿ ಕಾಲಿಗೆ ಚಾಕು ಹಾಕಿ ಎರಡೂವರೆ ಲಕ್ಷ ಕಿತ್ತುಕೊಂಡಿದೆ. ಕಿಡ್ನಾಪ್ ಬಳಿಕ ಹಣ ಪಡೆದು ಶಾಂತಕುಮಾರ್ ರನ್ನು ಅಪಹರಣಕಾರರು ಮನೆಗೆ ಬಿಟ್ಟು ಹೋಗಿದ್ದಾರೆ. ಘಟನೆಯ ಬಳಿಕ ಪೊಲೀಸ್ ಠಾಣೆಯ ಮೆಟ್ಟಿಲೇರದೇ ಶಾಂತಕುಮಾರ್ ಸುಮ್ಮನಾಗಿದ್ದರು. 

ಕುಡಿದ ಮತ್ತಿನಲ್ಲಿ ಶಾಂತಕುಮಾರ್ ತನ್ನ ಸ್ನೇಹಿತರ ಬಳಿ ತನ್ನನ್ನು ಅಪಹರಿಸಿದ್ದ ಬಗ್ಗೆ ಹೇಳಿದ್ದರು.  ಈ ವಿಚಾರ ತಿಳಿದ ಕೆಪಿ ಅಗ್ರಹಾರ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು