ರಾಜಕೀಯ ಫುಲ್ ಗರಂ: 8 ಕೋಟಿ ರೂ.ವೆಚ್ಚದ ಕಟ್ಟಡ ಬೀಳಿಸಿದ ಸಿಎಂ!

By Web DeskFirst Published Jun 26, 2019, 12:09 PM IST
Highlights

ರಾಜಕೀಯ ದ್ವೇಷಕ್ಕೆ 8 ಕೋಟಿ ರೂ. ವೆಚ್ಛದ ಕಟ್ಟಡ ನೆಲಸಮ| ಹಾಲಿ ಮತ್ತು ಮಾಜಿ ಸಿಎಂ ನಡುವಿನ ರಾಜಕೀಯ ಕದ ತಾರಕಕ್ಕೆ| ನೆರೆಯ ಆಂಧ್ರದಲ್ಲಿ ಗರಿ ಬಿಚ್ಚಿದ ರಾಜಕೀಯ ದ್ವೇಷ| ಟಿಡಿಪಿ ಪಕ್ಷದ ಪ್ರಜಾವೇದಿಕೆ ಕಟ್ಟಡ ನೆಲಸಮ| ಮರಾವತಿಯಲ್ಲಿ 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದ್ದ ಟಿಡಿಪಿ ಕಟ್ಟಡ| ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ನಡುವಿನ ಕದನ| ಕಟ್ಟಡ ನೆಲಸಮ ಮಾಡಿದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ| 

ಅಮರಾವತಿ(ಜೂ.26): ರಾಜಕೀಯ ದ್ವೇಷವನ್ನೇ ಉಸಿರಾಡುವ ನೆರೆಯ ಆಂಧ್ರದಲ್ಲಿ ಹಾಲಿ ಮತ್ತು ಮಾಜಿ ಸಿಎಂ ನಡುವಿನ ವೈಮನಸ್ಸು ತಾರಕಕ್ಕೇರಿದೆ.

ನೂತನ ಸಿಎಂ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ಕದನದಲ್ಲಿ ಟಿಡಿಪಿಯ ಕಟ್ಟವೊಂದು ನೆಲಸಮವಾಗಿದೆ.

: Demolition of 'Praja Vedike' building underway in Amaravati. The building was constructed by the previous government led by N. Chandrababu Naidu. pic.twitter.com/qRCWjfVTJZ

— ANI (@ANI)

ಹೌದು, ಆಂಧ್ರದ ನೂತನ ರಾಜಧಾನಿ ಅಮರಾವತಿಯಲ್ಲಿ ಸುಮಾರು 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದ್ದ ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕಟ್ಟಡವನ್ನು ಆಂಧ್ರ ಸರ್ಕಾರ ಧರೆಗುರುಳಿಸಿದೆ.

ನಾಯ್ಡುಗೆ ಆಘಾತ: ಸಿಎಂ ಕುರ್ಚಿ ಹೋಯ್ತು, ಈಗ ಮನೆಯೂ ಕಳೆದುಕೊಳ್ಳುವ ಸರದಿ!

ನೂತನ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ರಚನೆ ಬಳಿಕ, ನಾಯ್ಡು ವಿರುದ್ಧ ಕೈಗೊಂಡ ಮೊದಲ ಕ್ರಮ ಇದಾಗಿದ್ದು  ನಿನ್ನೆ(ಮಂಗಳವಾರ)ರಾತ್ರಿಯೇ ಕಟ್ಟಡ ನೆಲಸಮ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Andhra Pradesh: Demolition of 'Praja Vedike' building is underway in Amaravati. The building was constructed by the previous government led by N Chandrababu Naidu. pic.twitter.com/ZCpqBzmEZC

— ANI (@ANI)

ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಕಟ್ಟಡವವನ್ನು ಸಂಪೂರ್ಣ ಕೆಡವಿ ಹಾಕಿದೆ. ಅಕ್ರಮವಾಗಿ ಈ ಕಟ್ಟಡವನ್ನು ಕಟ್ಟಲಾಗಿದ್ದು, ಈ ಹಿನ್ನೆಲೆಯಲ್ಲಿ ನೆಲಸಮ ಮಾಡಲಾಗಿದೆ ಎಂದು  ಸಿಆರ್‌ಡಿಎ ಸ್ಪಷ್ಟಪಡಿಸಿದೆ.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನಿವಾಸದ ಸಮೀಪದಲ್ಲೇ ಪ್ರಜಾ ವೇದಿಕೆ ಕಟ್ಟಡವನ್ನು 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿತ್ತು.

click me!