ತಂತ್ರಜ್ಞಾನ ಇಷ್ಟೊಂದು ಬೆಳೆದಿದ್ದರೂ ಸಾವಿನ ರಿಸ್ಕ್ ತೆಗದುಕೊಂಡದ್ದೇಕೆ - ರಿಷಿ ಕಪೂರ್ ಪ್ರಶ್ನೆ

By suvarna web deskFirst Published Nov 8, 2016, 5:38 AM IST
Highlights

ಅಷ್ಟೊಂದು ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನವಿದ್ದರೂ ಜೀವಹಾನಿಯಾಗುವಂತಹ ಸಾಹಸ ಯಾಕೆ ಬೇಕಿತ್ತು..? ಎಂದು ಪ್ರಶ್ನಿಸಿದ್ಧಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ್ಧಾರೆ.

ಬೆಂಗಳೂರು(ನ.08): ಮಾಸ್ತಿ ಗುಡಿ ಚಿತ್ರದ ಚಿತ್ರೀಕರಣದ ಅವಘಡಕ್ಕೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಕನ್ನಡ ಚಿತ್ರರಂಗದಿಂದಷ್ಟೇ ಅಲ್ಲ, ಬಾಲಿವುಡ್`ನಿಂದಲೂ ಹಿರಿಯ ನಟರು ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಅನಿಲ್ ಮತ್ತು ಉದಯ್ ಅವರ ದುರಂತ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ನಟ ರಿಷಿ ಕಪೂರ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಷ್ಟೊಂದು ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನವಿದ್ದರೂ ಜೀವಹಾನಿಯಾಗುವಂತಹ ಸಾಹಸ ಯಾಕೆ ಬೇಕಿತ್ತು..? ಎಂದು ಪ್ರಶ್ನಿಸಿದ್ಧಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ್ಧಾರೆ.

click me!