
ನವದೆಹಲಿ : ಭಾರತದಲ್ಲಿ ಬಡವರು ಬಡವರಾಗಿಯೇ ಹೋಗುತ್ತಿದ್ದಾರೆ. ಆದರೆ ಶ್ರೀಮಂತರ ಸಂಪತ್ತು ಅಧಿಕವಾಗುತ್ತಿದೆ. ಜಿಡಿಪಿಯ ಶೇ.15ರಷ್ಟುಸಂಪತ್ತು ದೇಶದ ಶತಕೋಟ್ಯಧೀಶ್ವರರರ ಬಳಿ ಇದೆ ಎಂದು ‘ಆಕ್ಸ್ಫಾಮ್ ಇಂಡಿಯಾ’ ಎಂಬ ಸಂಸ್ಥೆಯ ವರದಿ ಆತಂಕ ವ್ಯಕ್ತಪಡಿಸಿದೆ. 2017ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 101 ಶತಕೋಟ್ಯಧೀಶ್ವರರು ಇದ್ದಾರೆ.
‘ಶಠಿತೋಟ್ಯಧಿಪತಿಗಳು ಬಹುತೇಕ ಸಂಪತ್ತಿನ ಪಾಲನ್ನು ತಮ್ಮ ಬಳಿಯೇ ಕೂಡಿಟ್ಟುಕೊಂಡಿದ್ದಾರೆ. ಅವರು ‘ಸ್ನೇಹಿ ಬಂಡವಾಳಶಾಹಿತ್ವ’ ಹಾಗೂ ಆನುವಂಶಿಕ ಆಸ್ತಿಪಾಸ್ತಿಗಳಿಂದ ಶ್ರೀಮಂತರಾಗುತ್ತಲೇ ಸಾಗುತ್ತಿದ್ದಾರೆ. ಆದರೆ ಕೆಳಮಟ್ಟದ ಜನರು ತಮ್ಮ ಪಾಲು ಕುಸಿಯುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದಾರೆ. 1991ರಲ್ಲಿ ಅಳವಡಿಸಿಕೊಂಡ ದೊಡ್ಡ ಪ್ರಮಾಣದ ಆರ್ಥಿಕ ಉದಾರೀಕರಣ ಹಾಗೂ ಅದಾದ ನಂತರದ ನೀತಿಗಳ ಪರಿಣಾಮ ಇದಾಗಿದೆ’ ಎಂದು ವರದಿ ಹೇಳಿದೆ.
5 ವರ್ಷದ ಹಿಂದೆ ಶತಕೋಟ್ಯಧೀಶರು ದೇಶದ ಜಿಡಿಪಿಯಲ್ಲಿ ಶೇ.10ರಷ್ಟುಪಾಲು ಹೊಂದಿದ್ದರು. ಅದು ಐದೇ ವರ್ಷದಲ್ಲಿ ಶೇ.5ರಷ್ಟುಏರಿ ಶೇ.15ಕ್ಕೆ ಹೆಚ್ಚಿದೆ. 2017ರಲ್ಲಿ ಭಾರತದ ಶೇ.1ರಷ್ಟುಧನಿಕರ ಬಳಿಯ ಸಂಪತ್ತು 20.9 ಲಕ್ಷ ಕೋಟಿ ರುಪಾಯಿಗಳಷ್ಟುಹೆಚ್ಚಿದೆ. ಇದೇ ವೇಳೆ 67 ಕೋಟಿ ಬಡ ಭಾರತೀಯರ ಸಂಪತ್ತು ಕೇವಲ ಶೇ.1ರಷ್ಟುಏರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.