
ವಡೋದರಾ(ಸೆ.21): ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತಾನು ಸಲಿಂಗಿ ರಾಜ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ಮನ್ವೇಂದರ್, ಆನಂದ್ ಜಿಲ್ಲೆಯ ವಲ್ಲಭ ವಿದ್ಯಾನಗರ್ ನಲ್ಲಿನ ಸರ್ದಾರ್ ಪಟೇಲ್ ಯುನಿವರ್ಸಿಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಸಲಿಂಗಿ ವಿವಾಹ ತಪ್ಪಲ್ಲ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಈ ಕುರಿತು ಮಾತನಾಡಿದ ಅವರು, 2013ರಲ್ಲಿ ಕೆಲ ಧಾರ್ಮಿಕ ಮುಖಂಡರು ನಮ್ಮ ವಿರುದ್ಧವಾಗಿ ಮಾತನಾಡಿದ್ದರು. ಇವೆಲ್ಲಾ ವಿದೇಶಗಳಲ್ಲಿ ನಡೆಯುತ್ತದೆ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದರು.
ಅಲ್ಲದೆ ನಮ್ಮ ವಿರುದ್ಧ ಹೋರಾಡಲು ದೇಶದಲ್ಲಿನ ಹಿಂದೂಗಳು, ಮುಸ್ಲಿಂರು ಮತ್ತು ಕ್ರೈಸ್ತರು ಒಟ್ಟಾಗಿದ್ದರು. ಸಲಿಂಗಿ ವಿವಾಹ ಅಸ್ವಾಭಾವಿಕ ಅಪರಾಧಗಳು ಎಂದು ವಾದಿಸಿದ್ದರು ಎಂದು ಹೇಳಿದರು.
ಸಲಿಂಗಿ ಸೆಕ್ಸ್ ಅಪರಾಧ ಎಂದು ವಾದಿಸುವ ಧಾರ್ಮಿಕ ಮುಖಂಡರೇ ನನ್ನ ಜೊತೆ ಸೆಕ್ಸ್ ಮಾಡಬೇಕು ಎಂದು ಬಯಸಿದ್ದು ಇದು ನಮ್ಮ ವಿರುದ್ಧ ಅವರ ಹೋರಾಟ ಬರೀ ಬೂಟಾಟಿಕೆ ಎಂಬುದನ್ನು ತೋರಿಸುತ್ತದೆ ಎಂದು ಮನ್ವೇಂದರ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.