
ಬೆಂಗಳೂರು(ಆ.02): ಕಾಂಗ್ರೆಸ್'ನ ಪ್ರಭಾವಿ ಸಚಿವ ಕರ್ನಾಟಕದ ಇಂಧನ ಸಚಿವ ಡಿ. ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ರೆಸಾರ್ಟ್'ನಲ್ಲಿ ಆಶ್ರಯ ನೀಡಿರುವ ಬೆನ್ನಲ್ಲೇ ಈ ದಾಳಿ ನಡೆದಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಸದ್ಯ ಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಯೊಂದು ತಿಳಿದು ಬಂದಿದ್ದು, ಡಿಕೆಶಿ ಮನೆ ಮೇಲೆ ಇಂದೇ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಇದೇ ಕಾರಣ ೆಂದುಹೇಳಲಾಗುತ್ತಿದೆ.
ಸದ್ಯ ಕೇಳಿ ಬರುತ್ತಿರುವ ಮಾತುಗಳ ಅನ್ವಯ ಡಿಕೆಶಿ ಮನೆ ಮೇಲೆ 3 ದಿನದ ಹಿಂದೆಯೇ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಇಂದು ಗುಜರಾತ್ ಶಾಸಕರಿಗೆ ಇವತ್ತು ಗಿಫ್ಟ್ ಕೊಡುವ ಕಾರ್ಯಕ್ರಮ ನಿಗದಿಯಾಗಿತ್ತು. ಡಿಕೆಶಿ ಯಾವ ಗಿಫ್ಟ್ ನೀಡಲಿದ್ದರು ಎಂಬ ವಿಚಾರ ಗುಜರಾತ್ ಶಾಸಕರಿಗೂ ತಿಳಿದಿರಲಿಲ್ಲವಂತೆ. ಆದರೆ ಈ ಕುರಿತಾದ ಮಾಹಿತಿ ಮೊದಲೇ ಲಭ್ಯವಾಗಿದ್ದರಿಂದ ಗಿಫ್ಟ್ ಕೊಡುವ ಮುನ್ನವೇ ಐಟಿ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.