
ನವದೆಹಲಿ (ಮಾ.10): ಉದ್ಯಮಿ ವಿಜಯ್ ಮಲ್ಯ ಕಡೆಗೂ ಹಣವನ್ನು ಪಾವತಿಸಲು ಮುಂದಾಗಿದ್ದಾರೆ. ರೂ.9000 ಕೋಟಿ ಸುಸ್ಥಿದಾರರಾಗಿದ್ದು, ಒಂದೇ ಬಾರಿ ಇತ್ಯರ್ಥ ಮಾಡಲು ಸಿದ್ಧನಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದೇ ಬಾರಿ ಇತ್ಯರ್ಥ ಮಾಡುವ ಬಗ್ಗೆ ನೀತಿಗಳಿವೆ. ಸಾಕಷ್ಟು ಸಾಲಗಾರರು ಇದೇ ರೀತಿ ಇತ್ಯರ್ಥಪಡಿಸಿದ್ದಾರೆ. ಆದರೂ ನಮಗೆ ಯಾಕೆ ನಿರಾಕರಿಸುತ್ತಿದ್ದಾರೆ. ಬ್ಯಾಂಕುಗಳು ಇದನ್ನು ಪರಿಗಣಿಸದೇ ಇದ್ದುದರಿಂದ ನಾವು ಈ ವಿಚಾರವನ್ನು ಸುಪ್ರೀಂಕೋರ್ಟ್ ಮುಂದಿಟ್ಟಾಗ ಅದು ನಿರಾಕರಿಸಿದೆ. ನ್ಯಾಯೋಚಿತ ಆಧಾರದ ಮೇಲೆ ಇತ್ಯರ್ಥಪಡಿಸಲು ನಾನು ಸಿದ್ಧನಿದ್ದೇನೆ. ಎಂದು ಮಲ್ಯ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಈ ಎಲ್ಲಾ ತೊಡಕುಗಳನ್ನು ಕೊನೆಗಾಣಿಸಬೇಕು. ನಮ್ಮ ಜೊತೆ ಮಾತುಕತೆ ನಡೆಸಲು ಹಾಗೂ ಇತ್ಯರ್ಥಪಡಿಸುವಂತೆ ಬ್ಯಾಂಕುಗಳಿಗೆ ಸೂಚಿಸಬೇಕೆಂದು ಆಶಿಸುತ್ತೇನೆ ಎಂದು ಮಲ್ಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.