ಶಿಕ್ಷೆ ಆಗುವವರೆಗೆ ಅರೆಸ್ಟ್‌ ಮಾಡದ ಭರವಸೆ ಕೊಟ್ರೆ ಭಾರತಕ್ಕೆ ಬರುವೆ: ನಾಯ್ಕ್

Published : May 10, 2019, 07:56 AM IST
ಶಿಕ್ಷೆ ಆಗುವವರೆಗೆ ಅರೆಸ್ಟ್‌ ಮಾಡದ ಭರವಸೆ ಕೊಟ್ರೆ ಭಾರತಕ್ಕೆ ಬರುವೆ: ನಾಯ್ಕ್

ಸಾರಾಂಶ

ಭಯೋತ್ಪಾದನೆ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪ| ಶಿಕ್ಷೆ ಆಗುವವರೆಗೆ ಅರೆಸ್ಟ್‌ ಮಾಡದ ಭರವಸೆ ಕೊಟ್ರೆ ಭಾರತಕ್ಕೆ ಬರುವೆ: ನಾಯ್ಕ್|

ನವದೆಹಲಿ[ಮೇ.10]: ಭಯೋತ್ಪಾದನೆ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಿಂದ ಬಂಧನ ಭೀತಿಗೊಳಗಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ್ ಭಾರತಕ್ಕೆ ಹಿಂತಿರುಗುವ ಮಾತುಗಳನ್ನಾಡಿದ್ದಾನೆ. ಆದರೆ, ಅದಕ್ಕೂ ಮುನ್ನ ಭಯೋತ್ಪಾದನೆ ಪ್ರಕರಣದಲ್ಲಿ ತಾನು ತಪ್ಪಿತಸ್ಥ ಎಂದು ಸಾಬೀತಾಗುವವರೆಗೂ ತನ್ನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಭರವಸೆ ನೀಡಬೇಕು ಎಂಬ ಷರತ್ತು ಮುಂದಿಟ್ಟಿದ್ದಾನೆ.

‘ದಿ ವೀಕ್‌’ ಮ್ಯಾಗಜೀನ್‌ಗೆ ಸಂದರ್ಶನ ನೀಡಿದ ನಾಯ್ಕ್, ‘ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಆದರೆ, ಬಿಜೆಪಿ ಸರ್ಕಾರ ಬರುವ ಮುಂಚೆ ನೀವು ಸರ್ಕಾರದ ವಿರುದ್ಧ ಧ್ವನಿಯೆತ್ತಬಹುದಿತ್ತು. ಅಲ್ಲದೆ, ಯಾವುದೇ ಪ್ರಕರಣದಲ್ಲಿ ನೀವು ಶೇ.80ರಷ್ಟುಪ್ರಮಾಣದಲ್ಲಿ ನ್ಯಾಯ ನಿರೀಕ್ಷಿಸಬಹುದಿತ್ತು. ಆದರೆ, ಇಂದು ಶೇ.10-20 ಪ್ರಮಾಣದಲ್ಲಿ ಮಾತ್ರವೇ ನ್ಯಾಯ ಸಿಗುತ್ತಿದೆ,’ ಎಂದು ಆರೋಪಿಸಿದರು.

ಉಗ್ರ ಎಂಬ ಆರೋಪ ಹೊತ್ತ ಶೇ.90ರಷ್ಟುಮುಸ್ಲಿಮರು 10-15 ವರ್ಷದ ಬಳಿಕ ಖುಲಾಸೆಗೊಂಡರು. ಅದೇ ರೀತಿ ನಾನು ಒಂದು ಬಾರಿ ಬಂಧನಕ್ಕೊಳಗಾದರೆ, ಕನಿಷ್ಠ 10 ವರ್ಷ ಬಂಧನದಲ್ಲಿಡಲಾಗುತ್ತದೆ. ಹಾಗಾಗಿ, ಭಾರತಕ್ಕೆ ಬರುವ ಮೂಲಕ ನಾನೇಕೆ ಮೂರ್ಖನಾಗಲಿ ಎಂಬ ದಾಟಿಯಲ್ಲಿ ನಾಯ್ಕ್ ಮಾತನಾಡಿದ್ದಾನೆ. ನನ್ನನ್ನು ವಿಚಾರಣೆಗೊಳಪಡಿಸಬೇಕಿಂದಿದ್ದರೆ, ಎನ್‌ಐಎ ತಂಡ ಮಲೇಷಿಯಾಕ್ಕೆ ಬಂದು ವಿಚಾರಣೆ ನಡೆಸಬಹುದು ಎಂದಿದ್ದಾನೆ ನಾಯ್ಕ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!