
ಬೆಂಗಳೂರು: ಸಚಿವ ಬಸವರಾಜ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡುವುದರೊಂದಿಗೆ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆ ವಿಚಾರವು ಇಂದು ಹೊಸ ತಿರುವನ್ನು ಪಡೆದುಕೊಂಡಿದೆ.
ಹಿಂದೂ ಧರ್ಮದಲ್ಲಿ ವರ್ಣಭೇದ ನೀತಿ ಇದೆ, ಹೀಗಾಗಿ ಲಿಂಗಾಯತ ಧರ್ಮ ಪ್ರತ್ಯೇಕವಾಗಲಿ ಎಂದಿದ್ದೇವೆ, ಎಂದು ರಾಯರೆಡ್ಡಿ ಹೇಳಿದ್ದಾರೆ.
ಶೈವ ಅಂತ ಸೇರಿದ ಕೂಡಲೇ ಅದು ಹಿಂದೂ ಧರ್ಮದ ಭಾಗ ಅಂತ ಆಗುತ್ತೆ. ಹೀಗಾಗಿ ಶೈವ ತೆಗೆದು ಹಾಕಿ ವೀರ ಲಿಂಗಾಯತ ಅಂತ ಮಾಡಿ ಎಂದೂ ಹೇಳಿದ್ದೇನೆ, ಧರ್ಮ ಯಾರು ಬೇಕಾದರೂ ಮಾಡಬಹುದು ಎಂದು ಅವರು ಹೇಳಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲು ಒಪ್ಪಿದ್ದಾರೆ. 15 ಜನರ ಸಮಿತಿ ರಚನೆ ಆಗಬೇಕಿದೆ. ಈ ಸಮಿತಿಯಲ್ಲಿ ತಜ್ಞರು, ಸ್ವಾಮೀಜಿಗಳು ಎಲ್ಲರೂ ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಧರ್ಮ ಯಾರು ಬೇಕಾದರೂ ಮಾಡಬಹುದು, ನಾಳೆ ನಾನೇ ಒಂದು ಧರ್ಮ ಆರಂಭಿಸುತ್ತೇನೆ, ನಾಳೆ ನಾನೇ ಒಬ್ಬ ಸ್ವಾಮೀಜಿ ಆಗ್ತೇನೆ, ಅಲ್ಪಸಂಖ್ಯಾತ ಮಾನ್ಯತೆ ಕೊಡೋದಷ್ಟೇ ಸರ್ಕಾರದ ಕೆಲಸ, ಎಂದು ಅವರು ಹೇಳಿದ್ದಾರೆ.
ಲಿಂಗಾಯತ ಧರ್ಮ ಒಪ್ಪಿದರೆ ಬಹುದೇವರ ಉಪಾಸನೆ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.