ವಿಧಾನಸೌಧಕ್ಕೆ ಸೂಟ್'ಕೇಸ್ ತೆಗೆದುಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತಂತೆ!

Published : Sep 14, 2017, 02:11 PM ISTUpdated : Apr 11, 2018, 12:48 PM IST
ವಿಧಾನಸೌಧಕ್ಕೆ ಸೂಟ್'ಕೇಸ್ ತೆಗೆದುಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತಂತೆ!

ಸಾರಾಂಶ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂಭ್ರಮದ ನಡುವೆ ಮತ್ತೊಂದು ವಿವಾದ ತಲೆದೋರಿದೆ. ಹಂಪಿ ವಿವಿಯ ಕುಲಪತಿ  ಮಲ್ಲಿಕಾಘಂಟಿ,ವಿಧಾನಸೌಧಕ್ಕೆ ಸೂಟ್'​​​​ಕೇಸ್ ತೆಗೆದುಕೊಂಡು ಹೋದರೆ ಮಾತ್ರ ಕೆಲಸವಾಗುತ್ತೆ ಅಂತ ವಿವಾದಾತ್ಮಕ ಹೇಳಿಕೆಯೊಂದನ್ನ  ನೀಡಿದ್ದಾರೆ. ಹಂಪಿ ಕನ್ನಡ ವಿವಿಯ ಸಿಬ್ಬಂದಿ ಕೊರತೆ ನೀಗಿಸುವುದಾಗಿ ಸಿಎಂ ಭರವಸೆ  ನೀಡಿದ್ದ  ಮರುದಿನವೇ ಈ ರೀತಿ ಹೇಳಿಕೆ ನೀಡಿದ್ದಾರೆ.

ಬಳ್ಳಾರಿ(ಸೆ.14): ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂಭ್ರಮದ ನಡುವೆ ಮತ್ತೊಂದು ವಿವಾದ ತಲೆದೋರಿದೆ. ಹಂಪಿ ವಿವಿಯ ಕುಲಪತಿ  ಮಲ್ಲಿಕಾಘಂಟಿ,ವಿಧಾನಸೌಧಕ್ಕೆ ಸೂಟ್'​​​​ಕೇಸ್ ತೆಗೆದುಕೊಂಡು ಹೋದರೆ ಮಾತ್ರ ಕೆಲಸವಾಗುತ್ತೆ ಅಂತ ವಿವಾದಾತ್ಮಕ ಹೇಳಿಕೆಯೊಂದನ್ನ  ನೀಡಿದ್ದಾರೆ. ಹಂಪಿ ಕನ್ನಡ ವಿವಿಯ ಸಿಬ್ಬಂದಿ ಕೊರತೆ ನೀಗಿಸುವುದಾಗಿ ಸಿಎಂ ಭರವಸೆ  ನೀಡಿದ್ದ  ಮರುದಿನವೇ ಈ ರೀತಿ ಹೇಳಿಕೆ ನೀಡಿದ್ದಾರೆ.

‘ಸಿಎಂ ನೀಡುವ ಭರವಸೆ ಒಂದೇ ದಿನಕ್ಕೆ ಮಾತ್ರ ಸೀಮಿತ’. ಸೂಟ್​​​ಕೇಸ್​​​ ಇಲ್ಲ ಅಂದ್ರೆ ವಿಶ್ವ ವಿದ್ಯಾಲಯಗಳ ಅಭಿವೃದ್ಧಿ ಆಗಲ್ಲ ಅಂತ ಸಿಎಂ ಭರವಸೆಗೆ ಮಲ್ಲಿಕಾಘಂಟಿ  ಟಾಂಗ್​ ಕೊಟ್ಟಿದ್ದಾರೆ.  ಈ ಮೂಲಕ ‌ವಿಧಾನಸೌಧಕ್ಕೆ ಸೂಟ್​​ಕೇಸ್​​​​ ತುಂಬಾ ಹಣ ಕೊಟ್ರೆ ಕೆಲಸ ಆಗುತ್ತಾ? ವಿವಿ ಕುಲಪತಿ ಮಲ್ಲಿಕಾ ಘಂಟಿ ಸೂಟ್​​​ಕೇಸ್​ ಮಾತಿನ ಮರ್ಮವೇನು? ಎಂಬ ಹೊಸದೊಂದು ಚರ್ಚೆ ಹುಟ್ಟುಹಾಕಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ಜೀವಂತ ಸುಡಲೆತ್ನ!
ಗಣಿನಾಡಲ್ಲಿ ರೆಡ್ಡಿಗಳ ರಕ್ತಚರಿತ್ರೆ: ಜನಾರ್ದನ ರೆಡ್ಡಿ ತಲೆಗೆ ಗುರಿ ಇಟ್ಟಿದ್ದಾರಾ ಬಿಹಾರದ ರೌಡಿಗಳು? ಬಳ್ಳಾರಿಯಲ್ಲಿ ಬುಲೆಟ್ ಸದ್ದು!