ಅಂದು ಕ್ರಿಕೆಟ್‌'ಗೆ, ಈಗ ಸೇನೆಯಲ್ಲೂ ಮೀಸಲಾತಿ!: SC, ST ಮೀಸಲಾತಿ ಪರ ಮಿನಿಸ್ಟರ್ ಬ್ಯಾಟಿಂಗ್‌!

Published : Aug 20, 2017, 03:45 PM ISTUpdated : Apr 11, 2018, 12:44 PM IST
ಅಂದು ಕ್ರಿಕೆಟ್‌'ಗೆ, ಈಗ ಸೇನೆಯಲ್ಲೂ ಮೀಸಲಾತಿ!: SC, ST ಮೀಸಲಾತಿ ಪರ ಮಿನಿಸ್ಟರ್ ಬ್ಯಾಟಿಂಗ್‌!

ಸಾರಾಂಶ

ಇಂಡಿಯನ್ ಕ್ರಿಕೆಟ್‌ ಟೀಂನಲ್ಲಿ ಎಸ್‌'ಸಿ, ಎಸ್‌'ಟಿ ಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮ್‌ದಾಸ್‌ ಅಥವಾಲೆ ಅವರು ಇದೀಗ ಸೇನೆಯಲ್ಲೂ ಮೀಸಲಾತಿ ನೀಡುವ ಬಗ್ಗೆ ಬ್ಯಾಟ್‌ ಬೀಸಿದ್ದಾರೆ.

ನವದೆಹಲಿ(ಆ.20): ಇಂಡಿಯನ್ ಕ್ರಿಕೆಟ್‌ ಟೀಂನಲ್ಲಿ ಎಸ್‌'ಸಿ, ಎಸ್‌'ಟಿ ಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮ್‌ದಾಸ್‌ ಅಥವಾಲೆ ಅವರು ಇದೀಗ ಸೇನೆಯಲ್ಲೂ ಮೀಸಲಾತಿ ನೀಡುವ ಬಗ್ಗೆ ಬ್ಯಾಟ್‌ ಬೀಸಿದ್ದಾರೆ.

ಭಾರತೀಯ ಸೇನೆಯಲ್ಲೂ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಜೊತೆಗೆ ಈ ಬಗ್ಗೆ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಕೇಂದ್ರ ಸಚಿವ ರಾಮ್‌ದಾಸ್ ತಿಳಿಸಿದ್ದಾರೆ.

ನಾವೆಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಡಾ.ಅಂಬೇಡ್ಕರ್ ಅವರ ಉದ್ದೇಶವನ್ನು ನೆನೆದ ಸಚಿವರು, ಎಲ್ಲ ಯುವಕರು ಭಾರತೀಯ ಸೇನೆಗೆ ಸೇರಬೇಕೆಂದು ಪ್ರತಿಪಾದಿಸಿದರು. ಈ ಹಿಂದೆ ಕೂಡ ರಾಮ್‌ದಾಸ್ ಅವರು ಮೀಸಲಾತಿ ಬಗ್ಗೆ ಮಾತನಾಡಿದ್ದು. ಆಗ ಇಂಡಿಯನ್ ಕ್ರಿಕೆಟ್‌ ಟೀಂನಲ್ಲಿ ಮೀಸಲಾತಿ ಕೇಳಿದ್ದರು. ಇದೀಗ ಇಂಡಿಯನ್ ಆರ್ಮಿಯಲ್ಲಿ ಮೀಸಲಾತಿಗೆ ಒತ್ತಾಯಿಸಿದ್ದಾರೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150
ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ: ಸಚಿವ ಶಿವರಾಜ ತಂಗಡಗಿ