
ನವದೆಹಲಿ (ನ.28): ರಾಜ್ಯಸಭೆಯಲ್ಲಿ ಇಂದು ಕೂಡಾ ನೋಟು ನಿಷೇಧದ ಗದ್ದಲ ಮುಂದುವರೆದಿದೆ.
ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸಂಸದರು ನೊಟು ನಿಷೇಧದ ಬಗ್ಗೆ ಪ್ರಧಾನಿಯವರು ಉತ್ತರಿಸಬೇಕೆಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.
ಘೋಷಣೆ ಬಿಡಿ ಚರ್ಚೆ ಮಾಡಿ ಎಂದು ಉಪಸಭಾಪತಿ ಪಿ ಜೆ ಕುರಿಯನ್ ಮನವಿ ಮಾಡಿದರೂ, ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರು ಬರಬೇಕು ಎಂದು ಪಟ್ಟುಹಿಡಿದಿದ್ದಾರೆ.
ಪ್ರಧಾನಿ ಎಲ್ಲಿದ್ದಾರೆ? ಸದನಕ್ಕೆ ಬರಲಿ ಎಂದ ಸಿ ಪಿ ಎಂ ನಾಯಕ್ ಸೀತಾರಾಮ್ ಯೆಚೂರಿ ಎಂದು ಆಗ್ರಹಿಸಿದ್ದಾರೆ. ವಿಪಕ್ಷಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಕ್ವಿ, ಪ್ರತಿಪಕ್ಷಗಳು ಕೂಡಲೇ ಚರ್ಚೆಗೆ ಬರಲಿ ನಾವು ತಯಾರಿದ್ದೇವೆ ಎಂದು ಸವಾಲೆಸೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.