ಶಾಂತ ಕಾಶ್ಮೀರಕ್ಕೆ ರಾಜನಾಥ್ ಸಪ್ತ ಸೂತ್ರ

Published : Jan 24, 2018, 08:17 PM ISTUpdated : Apr 11, 2018, 12:46 PM IST
ಶಾಂತ ಕಾಶ್ಮೀರಕ್ಕೆ ರಾಜನಾಥ್ ಸಪ್ತ ಸೂತ್ರ

ಸಾರಾಂಶ

ಕಳೆದ ಒಂದುವರೆ ವರ್ಷದಿಂದ ಪ್ರಕ್ಷುಬ್ಧವಾಗಿರುವ ಕಾಶ್ಮೀರ ಕಣಿವೆ ಕಣಿವೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ  ರಾಜನಾಥ್ ಸಿಂಗ್ ಸಪ್ತ ಸೂತ್ರ  

ನವದೆಹಲಿ: ಕಳೆದ ಒಂದುವರೆ ವರ್ಷದಿಂದ ನಿರಂತರವಾಗಿ ಪ್ರಕ್ಷುಬ್ಧವಾಗಿರುವ ಕಾಶ್ಮೀರ ಕಣಿವೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಪ್ತ ಸೂತ್ರಗಳನ್ನು ಘೋಷಿಸಿದ್ದಾರೆ.

ಕಣಿವೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿ ರಾಜನಾಥ್ ಸಿಂಗ್,  ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೈಗೊಳ್ಳಬಹುದಾದ 7 ಕ್ರಮಗಳನ್ನು ಪ್ರಕಟಿಸಿದ್ದಾರೆ.

ಕಲ್ಲೆಸತಗಾರರಿಗೆ ಕ್ಷಮೆ: ಭದ್ರತಾ ಪಡೆಗಳಿಗೆ ಕಲ್ಲೆಸೆದ ಆರೋಪ ಹೊತ್ತಿರುವ ಸುಮಾರು 3685 ವಿದ್ಯಾರ್ಥಿ-ಯುವಜನರಿಗೆ ಕ್ಷಮಿಸುವುವುದಾಗಿ ರಾಜ್ಯ ಸರ್ಕಾರ ಕಳೆದ ವರ್ಷ ನ.23ರಂದು ಘೋಷಿಸಿತ್ತು. ಕೇಂದ್ರ ಗೃಹ ಇಲಾಖೆಯು ಈ ಕ್ರಮಕ್ಕೆ ಸಮ್ಮತಿಯನ್ನು ಸೂಚಿಸಿದೆ.

ಉನ್ನತ ಮಟ್ಟದ ಸಮಿತಿ: ಇನ್ನುಳಿದ ಗಂಭೀರ ಕಲ್ಲೆಸೆತ ಪ್ರಕರಣಗಳ ಪರಿಶೀಲನೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಶರಣಾಗತಿ & ಪುನರ್ವಸತಿ ಯೋಜನೆ: ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಕರು ಮುಖ್ಯವಾಹಿನಿಯಲ್ಲಿ ಸೇರಲು ಪ್ರೇರೆಪಿಸುವ ನಿಟ್ಟಿನಲ್ಲಿ ಹೊಸ’ ಶರಣಾಗತಿ & ಪುನರ್ವಸತಿ’ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಸಲಹಾ ಮಂಡಳಿ: ವಲಸಿಗರು, ಸ್ಥಳಾಂತರಗೊಂಡವರು ಹಾಗೂ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ದೂರು ದುಮ್ಮಾನಗಳನ್ನು ಪರಿಹರಿಸಲು ಸಲಹಾ ಮಂಡಳಿಯನ್ನು ರಚಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ದುರಸ್ತಿ ಹಾಗೂ ಪುನರ್ನಿರ್ಮಾಣ: ಜಗತಿ ಮತ್ತು ತಲ್ವಾರದಲ್ಲಿ ಶಿಥಿಲಗೊಂಡ ನಿರಾಶ್ರಿತರ ಶಿಬಿರಗಳ ದುರಸ್ತಿ ಹಾಗೂ ಪುನರ್ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರವು ಸೂಚಿಸಿದೆ.

ಜಮ್ಮುವಿನಲ್ಲಿ ಕೃತಕ ಕೆರೆಗಳನ್ನು ನಿರ್ಮಿಸುವ ಕೆಲಸವನ್ನು ಪುನಾರಂಬಿಸುವಂತೆಯೂ ನಿರ್ಧರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು ಮುಳ್ಳಯ್ಯನಗಿರಿ ರಸ್ತೆಯಲ್ಲಿ ಪ್ರವಾಸಿ ಜೀಪ್ ಪಲ್ಟಿ; ಕೇರಳದ ಆರು ಶಾಲಾ ಮಕ್ಕಳಿಗೆ ಗಾಯ
ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ದುರಂತ, ಉಳಿತು ಪ್ರಯಾಣಿಕರ ಪ್ರಾಣ