‘ಚಾರಿತ್ರ್ಯಹೀನ ಅಕ್ಬರ್ ಸ್ತ್ರೀವೇಷ ಧರಿಸಿ ಮೀನಾ ಬಜಾರ್ ಗೆ ಬರ್ತಿದ್ದ’

Published : Jun 07, 2019, 05:38 PM ISTUpdated : Jun 07, 2019, 05:56 PM IST
‘ಚಾರಿತ್ರ್ಯಹೀನ ಅಕ್ಬರ್ ಸ್ತ್ರೀವೇಷ ಧರಿಸಿ ಮೀನಾ ಬಜಾರ್ ಗೆ ಬರ್ತಿದ್ದ’

ಸಾರಾಂಶ

ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ವಿವಾದ ಎಬ್ಬಿಸಿದ್ದಾರೆ.  ಮೊಘಲ್ ದೊರೆ ಅಕ್ಬರ್ ಬಗ್ಗೆ ಮಾತನಾಡುತ್ತ  ಮದನ್ ಲಾಲ್ ಅಕ್ಬರ್ ಒಬ್ಬ ಚಾರಿತ್ರ್ಯಹೀನ ಎಂದು ಕರೆದಿದ್ದಾರೆ.

ನವದೆಹಲಿ[ಜೂ. 07] ಮಹಾರಾಣಾ ಪ್ರತಾಪ್ ದಿನಾಚರಣೆ ಸಂದರ್ಭ ಮಾತನಾಡಿದ ಮದನ್ ಲಾಲ್, ಅಕ್ಬರ್ ಕೆಟ್ಟ ಕೆಲಸಗಳಿಗೆಂದೆ ಮೀನಾ ಬಜಾರ್ ಮಾಡಿಕೊಂಡಿದ್ದ. ಮೀನಾ ಬಜಾರ್ ನಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಪ್ರವೇಶವಿತ್ತು. ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುವ ಒಂದೇ ಕಾರಣಕ್ಕೆ ಸ್ತ್ರೀ ವೇಷ ಧರಿಸಿ ಮಿನಾ ಬಜಾರ್ ಗೆ ಅಕ್ಬರ್ ಬರುತ್ತಿದ್ದ ಎಂದು ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಹೆಣ್ಣಿನ ಅಂದಕ್ಕೆ ಸವಾಲು ಹಾಕ್ತಿದ್ದ ಪ್ರಿನ್ಸ್ ಹರೀಶ್ ಸಾಧನೆ ಹಿಂದಿದೆ ನೋವಿನ ಕಥೆ

ಈ ಮಾರುಕಟ್ಟೆಗೆ ಬರುತ್ತಿದ್ದ ಅಕ್ಬರ್ ಮಹಿಳೆಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಬಿಕೇನಾರ್ ರಾಣಿ ಕಿರಣ್ ದೇವಿ ಅವರೊಂದಿಗೆ ಅಕ್ಬರ್ ಕೆಟ್ಟದಾಗಿ ನಡೆದುಕೊಳ್ಳಲು ಮುಂದಾದಾಗ ಆಕೆ ಎಚ್ಚರ ವಹಿಸಿ ಬಚಾವಾಗಿದ್ದಳು ಎಂದು ಉಲ್ಲೇಖ ಮಾಡಿದ್ದಾರೆ.

ಮಹಾರಾಣಾ ಪ್ರತಾಪ್ ಮತ್ತು ಅಕ್ಬರ್ ನನ್ನು ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುತ್ತ ತೆರಳಿದ ಮದನ್ ಲಾಲ್ ಈ ರೀತಿಯ ಹೇಳಿಕೆ ನೀಡಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!