ಮತದಾನಕ್ಕೆ ಕೃಪೆ ತೋರಿದ ವರುಣ,  ಈ ಜಿಲ್ಲೆಗಳಲ್ಲಿ ಸಂಜೆ ಮಳೆಯಾಯ್ತು

By Web DeskFirst Published Apr 18, 2019, 8:13 PM IST
Highlights

ನಿನ್ನೆ ಕಾಣಿಸಿಕೊಂಡಿದ್ದ ವರುಣ ಇಂದು ಸಹ ಅಬ್ಬರಿಸಿದ್ದಾನೆ. ಆದರೆ ಮತದಾನಕ್ಕೆ ತೊಂದರೆ ಮಾಡಿಲ್ಲ.  ಜನರೆಲ್ಲ ಮತದಾನ ಮುಗಿಸಿದ ಮೇಲೆ ಸುರಿದ ಮಳೆ ತಂಪೆರೆಯಿತು.

ಬೆಂಗಳೂರು[ಏ. 18] ಮತದಾನ ಸಂಜೆ 6 ಗಂಟೆಗೆ ಮುಗಿಯುತ್ತಿರುವ ವೇಳೆ ಕೆಲವರು ಸರತಿ ಸಾಲಿನಲ್ಲಿ ಇದ್ದಾಗಲೆ ಮಳೆ ಸುರಿದಿದೆ. 

ರಾಜ್ಯದ ದಕ್ಷಿಣ ಭಾಗದ 14 ಕ್ಷೇತ್ರಗಳಲ್ಲಿಯೇ ಮತದಾನ ಇತ್ತು.. ಮಳೆ ಸಹ ರಾಜ್ಯದ ದಕ್ಷಿಣ ಒಳನಾಡಿನಲ್ಲಿಯೇ ಸುರಿದಿದೆ. ಬಿಸಿಲಿನ ಧಗೆ ಒಂದು ಕಡೆ ಕಡಿಮೆಯಾದರೆ ಇನ್ನೊಂದು ಕಡೆ ಎಲೆಕ್ಷನ್ ಬಿಸಿಯೂ  ಕಡಿಮೆಯಾಯಿತು. 

ಚುನಾವಣೆಗೂ ಮುನ್ನ ಬೆಂಗಳೂರಿನ ಮಳೆ ಮಾಡಿದ ಅನಾಹುತಗಳು

ಬೆಂಗಳೂರು, ಚಾಮರಾಜನಗರ, ಮೈಸೂರು ಸೇರಿದಂತೆ ಹಲವು ಕಡೆ ಸಂಜೆ ಮಳೆ ಸುರಿದಿದೆ. ಮಧ್ಯಾಹ್ನ ಅಥವಾ ಸಂಜೆ ಮಳೆ ಸುರಿಯಬಹುದು ಎಂಧು ಹವಾಮಾನ ಇಲಾಖೆ ಮೊದಲೆ ಎಚ್ಚರಿಸಿತ್ತು.

click me!