ರೈಲ್ವೆಯಲ್ಲಿನ್ನು ವಿಕಲಾಂಗ ಬದಲು ದಿವ್ಯಾಂಗ ಪದ ಬಳಕೆ

Published : Jan 27, 2018, 07:50 PM ISTUpdated : Apr 11, 2018, 12:40 PM IST
ರೈಲ್ವೆಯಲ್ಲಿನ್ನು ವಿಕಲಾಂಗ ಬದಲು ದಿವ್ಯಾಂಗ ಪದ ಬಳಕೆ

ಸಾರಾಂಶ

ಅಂಗವಿಕಲರನ್ನು 'ದಿವ್ಯಾಂಗ'ರೆಂದು ಕರೆಯಬೇಕೆಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ ಎರಡು ವರ್ಷಗಳ ನಂತರ, ಇದೀಗ ರೈಲ್ವೆ ಸಚಿವಾಲಯ ಈ ಪದ ಬದಲಾವಣೆಗೆ ಮುಂದಾಗಿದೆ.

ಹೊಸದಿಲ್ಲಿ: ಅಂಗವಿಕಲರನ್ನು 'ದಿವ್ಯಾಂಗ'ರೆಂದು ಕರೆಯಬೇಕೆಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ ಎರಡು ವರ್ಷಗಳ ನಂತರ, ಇದೀಗ ರೈಲ್ವೆ ಸಚಿವಾಲಯ ಈ ಪದ ಬದಲಾವಣೆಗೆ ಮುಂದಾಗಿದೆ.

ಅಂಗ ವೈಕಲ್ಯ ಹೊಂದಿರುವವರಿಗೆ ನೀಡುವ ಅನುಮತಿ ಪತ್ರದಲ್ಲಿ 'ದಿವ್ಯಾಂಗ' ಎಂಬ ಪದವನ್ನು ಬಳಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿಶೇಷ ಸವಲತ್ತು ನೀಡುವವರಿಗೆ ಅಂಗವಿಕಲರು ಎಂಬ ಪದವನ್ನು ಬಳಸುವಲ್ಲಿ ಇನ್ನು ದಿವ್ಯಾಂಗರು ಎಂಬ ಪದ ಬಳಸಲಾಗುವುದು. ಈ ಬಗ್ಗೆ ಸಂಬಂಧಿಸಿದಂತೆ ಇಲಾಖೆಗೆ ಈಗಾಗಲೇ ರೈಲ್ವೆ ಸಚಿವಾಲಯ ಸೂಚಿಸಿದ್ದು, ಫೆಬ್ರವರಿ 1 ರಿಂದ ಈ ಆದೇಶ ಜಾರಿಗೆ ಬರಲಿದೆ.

ಭಾರತೀಯ ರೈಲ್ವೆಯು ವಿವಿಧ ವರ್ಗದ ಜನರಿಗೆ 53 ವಿನಾಯಿತಿಗಳನ್ನು ನೀಡುತ್ತಿದ್ದು, ಇದರಲ್ಲಿ ದಿವ್ಯಾಂಗರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ರಕ್ಷಣಾ ಸಿಬ್ಬಂದಿ ಸೇರಿದ್ದು, ವಾರ್ಷಿಕ 1,600 ಕೋಟಿ ವ್ಯಯಿಸುತ್ತದೆ.

ಮಾತು ಬಾರದ, ಶ್ರವಣ ದೋಷ ಹೊಂದಿರುವವರಿಗೆ ಸೆಕಂಡ್, ಸ್ಲೀಪರ್ ಮತ್ತು ಫಸ್ಟ್ ಕ್ಲಾಸ್ ಟಿಕೆಟ್‌ನಲ್ಲಿ ಶೇ.50 ರಿಯಾಯತಿ, ದೃಷ್ಟಿ ದೋಷವುಳ್ಳವರಿಗೆ ಸ್ಲೀಪರ್, ಫಸ್ಟ್ ಕ್ಲಾಸ್, ಏಸಿ ಚೇರ್ ಕಾರ್ ಮತ್ತು ಎಸಿ 3 ಟಯರ್‌ನಲ್ಲಿ ಶೇ.75 ರಿಯಾಯತಿ, ಇತರೆ ವೈಕಲ್ಯ ಹೊಂದಿರುವವರಿಗೆ ಸೆಕೆಂಡ್, ಸ್ಲೀಪರ್, ಫಸ್ಟ್ ಕ್ಲಾಸ್, ಏಸಿ ಚೇರ್ ಕಾರ್ ಮತ್ತು ಏಸಿ 3 ಟಯರ್‌ನಲ್ಲಿ ಶೇ.75 ಹಾಗೂ ಎಸಿ 2 ಟಯರ್ ಮತ್ತು ಎಸಿ ಫಸ್ಟ್ ಕ್ಲಾಸಿನಲ್ಲಿ ಶೇ.50 ರಿಯಾಯತಿ ದೊರೆಯಲಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ
ಶಾಮನೂರು ಶಿವಶಂಕರಪ್ಪ ನಿಧನ: ಕಾಶಿ ಜಗದ್ಗುರು ಶ್ರೀಗಳ ಸಂತಾಪ,ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದು!