ರಾಹುಲ್ ಯಾತ್ರೆ ಇಂದು ಯಾದಗಿರಿಯತ್ತ

Published : Feb 12, 2018, 09:13 AM ISTUpdated : Apr 11, 2018, 01:02 PM IST
ರಾಹುಲ್ ಯಾತ್ರೆ ಇಂದು ಯಾದಗಿರಿಯತ್ತ

ಸಾರಾಂಶ

ಯುಪಿಎ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಹೈದರಾಬಾದ್ ಕರ್ನಾಟಕದ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರವಾಸ ಪೂರ್ಣಗೊಂಡಿದೆ. ಈಗಾಗಲೇ ರಾಯಚೂರಿನಲ್ಲಿರುವ ರಾಹುಲ್, ಇಂದು ಯಾದಗಿರಿಯತ್ತ ತೆರಳಲಿದ್ದಾರೆ.

ಬೆಂಗಳೂರು (ಫೆ.12): ಯುಪಿಎ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಹೈದರಾಬಾದ್ ಕರ್ನಾಟಕದ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರವಾಸ ಪೂರ್ಣಗೊಂಡಿದೆ. ಈಗಾಗಲೇ ರಾಯಚೂರಿನಲ್ಲಿರುವ ರಾಹುಲ್, ಇಂದು ಯಾದಗಿರಿಯತ್ತ ತೆರಳಲಿದ್ದಾರೆ.

ಹೈದ್ರಾಬಾದ್ ಕರ್ನಾಟಕದಲ್ಲಿ ಮಿಂಚಿನ ಸಚಾರ ನಡೆಸುತ್ತಿರುವ  ರಾಹುಲ್ ಗಾಂಧಿ ಎಂದಿನ ತಮ್ಮ ಟಾರ್ಗೆಟ್ ಮೋದಿ ಮಾತನ್ನ ಮುಂದುವೆಸಿದ್ದಾರೆ.  ಸಂಜೆ ರಾಯಚೂರಿನ ಸಿಂಧನೂರಿನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್,  ನರೇಂದ್ರ ಮೋದಿ ಕೇವಲ ಗತ ಕಾಲದ ಬಗ್ಗೆ ಮಾತನಾಡದೇ ಅಭಿವೃದ್ಧಿಗೆ ಒತ್ತು ಕೊಡಿ, ಅಭಿವೃದ್ಧಿ ವಿಚಾರದಲ್ಲಿ ಸಿದ್ಧರಾಮಯ್ಯ ನವರನ್ನ ನೋಡಿ ಕಲಿಯಬೇಕಿದೆ ಅಂತಾ ಹರಿಹಾಯ್ದರು. 

ಇವತ್ತು ರಾಯಚೂರಿನ ಗಂಜ್, ಕಲ್ಮಲಾದಲ್ಲಿ ರೋಡ್ ಶೋ ನಡೆಸಿ ಬಳಿಕ ದೇವದುರ್ಗದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಆನಂತರ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನಲ್ಲಿ ರೋಡ್​​ ಶೋ ನಡೆಸಲಿದ್ದಾರೆ. ಬಳಿಕ ಹತ್ತಿಗೂಡುರದಿಂದ ಶಹಾಪೂರ ಮಾರ್ಗವಾಗಿ ಕಲಬುರಗಿಗೆ ತೆರಳಲಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್: ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ
ನಗರಪಾಲಿಕೆ ಚುನಾವಣೆ ಗೆದ್ದ 77 ವರ್ಷದ ಅಜ್ಜಿ, ಫಲಿತಾಂಶ ಬಂದ ಬೆನ್ನಲ್ಲೇ ಕಣ್ಣೀರು!