ಸಹಾರಾ ಡೈರಿ: ತನಿಖೆ ಎದುರಿಸಲು ಮೋದಿಗೆ ಭಯವೇಕೆ? ರಾಹುಲ್ ಗಾಂಧಿ ಪ್ರಶ್ನೆ

Published : Jan 05, 2017, 07:56 AM ISTUpdated : Apr 11, 2018, 12:36 PM IST
ಸಹಾರಾ ಡೈರಿ: ತನಿಖೆ ಎದುರಿಸಲು ಮೋದಿಗೆ ಭಯವೇಕೆ? ರಾಹುಲ್ ಗಾಂಧಿ ಪ್ರಶ್ನೆ

ಸಾರಾಂಶ

ಕಾನೂನು ಕ್ರಮ ಎದುರಿಸುವುದರಿಂದ ವಿನಾಯಿತಿ ನೀಡಲಾಗಿರುವುದು ಸಹಾರಾ ಕಂಪನಿಗೋ, ಪ್ರಧಾನಿ ಮೋದಿಗೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ತನಿಖೆಯನ್ನೆದುರಿಸಲು ಏಕೆ ಭಯಪಡುತ್ತಿದ್ದಾರೆ ಎಂದು ಕೇಳಿದ್ದಾರೆ.

ನವದೆಹಲಿ (ಜ.05):  ಸಹಾರಾ ಇಂಡಿಯಾ ಕಂಪನಿಗೆ ಕಾನೂನು ಕ್ರಮ ಎದುರಿಸುವುದರಿಂದ ವಿನಾಯಿತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರು ತನಿಖೆಯನ್ನೆದುರಿಸಲು ಏಕೆ ತಯಾರಿಲ್ಲವೆಂದು ಪ್ರಶ್ನಿಸಿದ್ದಾರೆ.

ಕಾನೂನು ಕ್ರಮ ಎದುರಿಸುವುದರಿಂದ ವಿನಾಯಿತಿ ನೀಡಲಾಗಿರುವುದು ಸಹಾರಾ ಕಂಪನಿಗೋ, ಪ್ರಧಾನಿ ಮೋದಿಗೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ತನಿಖೆಯನ್ನೆದುರಿಸಲು ಏಕೆ ಭಯಪಡುತ್ತಿದ್ದಾರೆ ಎಂದು ಕೇಳಿದ್ದಾರೆ.

2014ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಸಹಾರಾ ಕಂಪನಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ ಡೈರಿಯಲ್ಲಿ  ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ ಸೇರಿದಂತೆ ಇತರ ಪ್ರಭಾವಿ ರಾಜಕಾರಣಿಗಳಿಗೆ ಹಣ ಪಾವತಿಸಲಾದ ವಿವರಗಳಿತ್ತು. ಆ ಘಟನೆ ಬಳಿಕ ಬಳಿಕ ಸಹಾರಾ ಕಂಪನಿಗೆ  ಕಾನೂನು ಕ್ರಮ ಎದುರಿಸುವುದರಿಂದ ಹಾಗೂ ದಂಡ ವಿಧಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆ ದು ಆಂಗ್ಲ ದೈನಿಕ ಗುರುವಾರ ವರದಿ ಮಾಡಿತ್ತು.

ದಾಳಿಯ ಸಂದರ್ಭದಲ್ಲಿ ಸಿಕ್ಕಿದ ಬಿಡಿ ಹಾಳೆಗಳನ್ನು ಸಾಕ್ಷ್ಯಾಧಾರವಾಗಿ ಪರಿಗಣಿಸಲಾಗದು ಎಂಬ ಸಹಾರಾ ವಾದಕ್ಕೆ ಮಾನ್ಯತೆ  ನೀಡಿದ್ದ ಆದಾಯ ತೆರಿಗೆ ಇತ್ಯರ್ಥ ಆಯೋಗವು (ಐಟಿಎಸ್’ಸಿ), ಜಪ್ತಿ ಮಾಡಲಾದ ರೂ.137.58 ಕೋಟಿಗೆ 12 ಕಂತುಗಳಲ್ಲಿ ತೆರಿಗೆ ಕಟ್ಟಿದರೆ ಸಾಕು ಎಂದು ಆದೇಶಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ