ಬೀದಿಬದಿ ದನಗಳ ಹಾವಳಿ ತಪ್ಪಿಸಲು ಗೂಳಿಗಳಿಗೆ ಸಂತಾಣಹರಣ ಚಿಕಿತ್ಸೆ

By Suvarna Web DeskFirst Published Jul 16, 2017, 4:30 PM IST
Highlights

ಜಾನುವಾರು ಮತ್ತು ಚರ್ಮದ ಉದ್ಯಮದ ಕುಸಿತದಿಂದಾಗಿ ಹೆಚ್ಚುತ್ತಿರುವ ಬೀದಿ ಬದಿ ದನಗಳ ಸಮಸ್ಯೆ ನಿವಾರಿಸಲು ಎತ್ತುಗಳಿಗೆ ಸಂತಾನ ಹರಣ ಮಾಡಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ,

ಚಂಡೀಗಢ: ಜಾನುವಾರು ಮತ್ತು ಚರ್ಮದ ಉದ್ಯಮದ ಕುಸಿತದಿಂದಾಗಿ ಹೆಚ್ಚುತ್ತಿರುವ ಬೀದಿ ಬದಿ ದನಗಳ ಸಮಸ್ಯೆ ನಿವಾರಿಸಲು ಎತ್ತುಗಳಿಗೆ ಸಂತಾನ ಹರಣ ಮಾಡಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ,

ಗೋವುಗಳ ಅಂತರಾಜ್ಯ ಸಾಗಾಟ ನಿಯಮಗಳು, ಗೋರಕ್ಷಕರ ಕಾಟ, ನೋಟು ಅಪಪಮೌಲ್ಯೀಕರಣ ಮತ್ತು ಜಿಎಸ್ಟಿಯಿಂದಾಗಿ ಹೆಚ್ಚಿರುವ ತೆರಿಗೆಯ ಪರಿಣಾಮ ಜಾನುವಾರು ಮತ್ತು ಚರ್ಮೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ.

ಉದ್ಯಮ ಮುನ್ನಡೆಸುವ ಸಾಧ್ಯತೆ ಕುಸಿಯುತ್ತಿರುವುದರಿಂದ, ವ್ಯಾಪಾರಿಗಳು ಮತ್ತು ಕೃಷಿಕರು ತಮ್ಮ ದನಗಳನ್ನು ಬೀದಿ ಬದಿಗೆ ಬಿಡುತ್ತಿದ್ದಾರೆ. ಇದರಿಂದಾಗಿ ಬೀದಿ ಬದಿ ದನಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸಾಕಾಷ್ಟು ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ.

click me!