ವಂಚಕ ಸಚಿನ್ ನಾಯಕ್ ವಿರುದ್ಧ ಸಂಘಟಿತ ಹೋರಾಟ

Published : Jan 24, 2017, 09:13 PM ISTUpdated : Apr 11, 2018, 12:38 PM IST
ವಂಚಕ ಸಚಿನ್ ನಾಯಕ್ ವಿರುದ್ಧ  ಸಂಘಟಿತ ಹೋರಾಟ

ಸಾರಾಂಶ

ಸ್ವಂತ ಮನೆಯ ಆಸೆ ಹುಟ್ಟಿಸಿ ಸಾವಿರಾರು ಜನರಿಗೆ ಮೋಸ ಮಾಡಿರುವ ಸಚಿನ್​​ ನಾಯಕ್​ ವಿರುದ್ಧ ಹೋರಾಟ ಮತ್ತಷ್ಟು ಜೋರಾಗಿದೆ. ಇಂದು ಸಾವಿರಾರು ಮಂದಿ ಗ್ರಾಹಕರು ಒಂದೆಡೆ ಸೇರಲಿದ್ದು, ಹೋರಾಟದ ರೂಪರೇಷೆ ನಿರ್ಧರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಈ ಹೋರಾಟದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರು(ಜ.25): ಸ್ವಂತ ಮನೆಯ ಆಸೆ ಹುಟ್ಟಿಸಿ ಸಾವಿರಾರು ಜನರಿಗೆ ಮೋಸ ಮಾಡಿರುವ ಸಚಿನ್​​ ನಾಯಕ್​ ವಿರುದ್ಧ ಹೋರಾಟ ಮತ್ತಷ್ಟು ಜೋರಾಗಿದೆ. ಇಂದು ಸಾವಿರಾರು ಮಂದಿ ಗ್ರಾಹಕರು ಒಂದೆಡೆ ಸೇರಲಿದ್ದು, ಹೋರಾಟದ ರೂಪರೇಷೆ ನಿರ್ಧರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಈ ಹೋರಾಟದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಇಂದು ಒಂದೆಡೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚೆ

12 ಸಾವಿರಕ್ಕೂ ಹೆಚ್ಚು ಜನರಿಂದ ಸಾವಿರಾರು ಕೋಟಿ ಪಡೆದು ವಂಚಿಸಿದ್ದ ಡ್ರೀಮ್ಸ್​ ಜಿಕೆ ಕಂಪನಿ ಮಾಲೀಕ ಸಚಿನ್​​ ನಾಯಕ್  ವಿರುದ್ಧ ಸಂಘಟಿತ ಹೋರಾಟ ಆರಂಭವಾಗಿದೆ. ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಾವಿರಾರು ಜನರು ಈಗಾಗಲೇ ಸಿಎಂ, ಗೃಹಸಚಿವರು, ಬೆಂಗಳೂರು ಪೊಲೀಸ್​ ಆಯುಕ್ತರ ಗಮನ ಸೆಳೆದಿದ್ದು, ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಒಂದು ಹಂತಕ್ಕೆ ನ್ಯಾಯದ ಭರವಸೆ ಪಡೆದುಕೊಂಡಿರುವ ಈ ಗ್ರಾಹಕರು ಒಂದೆಡೆ ಸೇರಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ. 

ಇದೇ ಹಿನ್ನೆಲೆಯಲ್ಲಿ ರಾಜಾಜಿನಗರದ ವೆಸ್ಟ್​ ಆಫ್​ ಕಾರ್ಡ್​ ರಸ್ತೆಯಲ್ಲಿರುವ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ  ಇಂದು ಸಭೆ ನಡೆಯಲಿದೆ. ಸ್ವಾತಂತ್ರ ಹೋರಾಟಗಾರ ಹೆಚ್​.ಎಸ್​.ದೊರೆಸ್ವಾಮಿ  ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾನೂನು ಹೋರಾಟ ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ. ಈ ಸಂಬಂಧ ಬೆಂಗಳೂರಿನ ಬಹುತೇಕ ಗ್ರಾಹಕರು ಬಾಗವಹಿಸಲಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿರುವ ಗ್ರಾಹಕರೂ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಹಣ ಕಳೆದುಕೊಂಡವರ ದಿಟ್ಟ ಹೋರಾಟಕ್ಕೆ ಈಗಾಗಲೇ ಹೆದರಿರುವ ಸಚಿನ್​ ನಾಯ್ಕ್ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ. ಮೋಸಹೋದ  ಗ್ರಾಹಕರು ಕಾನೂನು ಮೂಲಕ ತಮ್ಮ ಹಣವನ್ನು ಹಿಂಪಡೆಯಲು ದಿಟ್ಟ ಹೆಜ್ಜೆ ಇಟ್ಟಿದ್ದು, ಪೊಲೀಸ್​ ಇಲಾಖೆ ಕೂಡ ಗ್ರಾಹಕರ ಬೆಂಬಲಕ್ಕೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ
ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!