ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ: ಸಚಿವ ರಾಯರೆಡ್ಡಿ

Published : Jan 24, 2017, 04:27 PM ISTUpdated : Apr 11, 2018, 01:02 PM IST
ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ: ಸಚಿವ ರಾಯರೆಡ್ಡಿ

ಸಾರಾಂಶ

ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಈಗಾಗಲೇ ಬಿಜೆಪಿಯಲ್ಲಿ ಕೆಲವೊಂದು ಶಾಸಕರ ವೈಮನಸ್ಸು ಆರಂಭವಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಬಹಿರಂಗವಾಗಿ ಯಡಿಯೂರಪ್ಪ  ವಿರುದ್ಧ ಮಾತನಾಡಿದ್ದಾರೆ. ಸೋಮಣ್ಣ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್​’ನ ಶಾಸಕರು ಸೇರಿದಂತೆ 40 ರಿಂದ 50 ಕ್ಕೂ ಹೆಚ್ಚು ಜನ ಕಾಂಗ್ರೆಸ್​​ಗೆ ಬರಬಹುದು ಎಂದು  ಹೇಳಿದ್ದಾರೆ.

ಕೊಪ್ಪಳ (ಜ.24): ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿದ್ದು, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಈಗಾಗಲೇ ಬಿಜೆಪಿಯಲ್ಲಿ ಕೆಲವೊಂದು ಶಾಸಕರ ವೈಮನಸ್ಸು ಆರಂಭವಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಬಹಿರಂಗವಾಗಿ ಯಡಿಯೂರಪ್ಪ  ವಿರುದ್ಧ ಮಾತನಾಡಿದ್ದಾರೆ. ಸೋಮಣ್ಣ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್​’ನ ಶಾಸಕರು ಸೇರಿದಂತೆ 40 ರಿಂದ 50 ಕ್ಕೂ ಹೆಚ್ಚು ಜನ ಕಾಂಗ್ರೆಸ್​​ಗೆ ಬರಬಹುದು ಎಂದು  ಹೇಳಿದ್ದಾರೆ.

2008ರಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾದಾಗ ಯಡಿಯೂರಪ್ಪಗೆ ಅನುಕಂಪ ಹಾಗೂ ಜನಪ್ರಿಯತೆ ಇತ್ತು. ಅಂತಹ ವೇಳೆಯಲ್ಲಿಯೇ ಬಿಜೆಪಿಯವರು ಕೇವಲ 110 ಸ್ಥಾನಗಳನ್ನು ಮಾತ್ರ ಗೆಲ್ಲಲು ಕಾರಣವಾಯಿತು. ಆದರೆ ಆವಾಗಿನ ಜನಪ್ರಿಯತೆ ಹಾಗೂ ಅನುಕಂಪ ಈಗ ಇಲ್ಲ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವವರು ಹಾಗೂ ಅಸಮಧಾನ ಇರುವ ಕಾಂಗ್ರೆಸ್​​’ನವರು ಒಂದಿಬ್ಬರು ಬೇರೆ ಪಕ್ಷಗಳಿಗೆ ಹೋಗಬಹುದು ಎಂದು ರಾಯರೆಡ್ಡಿ ಹೇಳಿದ್ದಾರೆ.

ನಾನೂ ಸಹ ವೈಯ್ಯಕ್ತಿಕವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಲಿಂಗಾಯತರಿಗೆ ಕೊಡಬೇಕೆಂದು ಮನವಿ ಮಾಡುತ್ತೇನೆ, ಆದರೆ ಅಂತಿಮವಾಗಿ ಇದರ ಬಗ್ಗೆ ಹೈಕಮಾಂಡ ನಿರ್ಧಾರ ಮಾಡುತ್ತದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ
ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!